ಕಾಡು ಮಲ್ಲಿಗೆಯೊಂದು ಕಾಡಿನಲಿ ನರಳುತಿದೆ
ಬಾಡಿ ಹೋಗುವ ಮುನ್ನ ಕೀಳುವವರಾರೆಂದು
ಅರಳಿ ನಿಂತರು ದೇವಾ, ನೆರಳಿನಲಿ ನಾನಿಲ್ಲ
ಪಸರಿಸುವ ಪರಿಮಳವ ಆಘ್ರಾಣಿಸುವವರಿಲ್ಲ
ಏಕೆನಿತೋ ಕಾಡಿನಲಿ ಮುನಿದು ನಿಲ್ಲಿಸಿದೆ
ಯಾವ ಪಾಪಕೆ ನನ್ನ ಇಂತು ಎಸೆದೆ
//ಕಾಡು//
ಅಡಿಯ ಸೇರುವ ಭಾಗ್ಯ ಪಡೆದು ಬರಲಿಲ್ಲ
ಮುಡಿಯನೇರುವ ದಾರಿ ನಾ ಕಾಣಲಿಲ್ಲ
ಕನವರಿಸಿ ಕೇಳುತಿಹೆ ಕರುಣೆ ತೋರೆಂದು
ಮುಡಿವ ಮಲ್ಲಿಗೆಯಾಗಿ ಬಾಳಬೇಕೆಂದು
//ಕಾಡು//
No comments:
Post a Comment