ಹೆಂಡತಿಯ ಕಾಗದ - ಕೆ. ಎಸ್. ನರಸಿಂಹ ಸ್ವಾಮಿ
ಇಂದು ನಮ್ಮ ಸಮಾಜದಲ್ಲಿ ಅನೇಕ ಬದಲಾವಣೆಗಳನ್ನು ಕಾಣುತ್ತಿದ್ದೇವೆ. ಈಗ ೫೦ ವರ್ಷದ ಅಥವಾ ಅದಕ್ಕೂ ಹಿಂದೆ ಇದ್ದ ಅನೇಕ ಆಚರಣೆ, ಪದ್ದತಿಗಳು ಇಂದು ಬದಲಾಗುತ್ತಿವೆ ಅಥವಾ ಕಣ್ಮರೆಯಾಗುತ್ತಿದೆ. ಹಿಂದೆ ತವರುಮನೆಗೆ ಹೋಗುವುದು, ತಾಯಿಯೊಂದಿಗಿನ ಸಖ್ಯ ಇತ್ಯಾದಿಗಳು ಏನೋ ಆನಂದವನ್ನು ಕೊಡುತ್ತಿದ್ದವು, ಆದರೆ ಇಂದು ಹೊರದೇಶಗಳಲ್ಲಿರುವ ಮಗಳಿಗಾಗಿ ತವರೇ ಮಗಳ ಮನೆಗೆ ವರ್ಗಾವಣೆಯಾಗುತ್ತಿದೆ. ಮೊಬೈಲ್, ಮಿಂಚಂಚೆ ಇವುಗಳು ಕ್ರಾಂತಿಯನ್ನೇ ತಂದಿದೆ.
ಈಗ ನಾವು ಚರ್ಚಿಸುತ್ತಿರುವುದು ಕೆ ಎಸ್ ನರಸಿಂಹ ಸ್ವಾಮಿ ಅವರ "ಹೆಂಡತಿಯ ಕಾಗದ" ಎಂಬ ಕವನದ ಬಗ್ಗೆ. ಹೆಂಡತಿಯ ಕಾಗದವು ಕವನದ ರೂಪದಲ್ಲಿ ಹೊರಹೊಮ್ಮಿದೆ.
ಮದುವೆಯಾದ ನಂತರ ಮೊದಲ ಹೆರಿಗೆ ತವರು ಮನೆಯಲ್ಲೇ ಆಗಬೇಕು ಎಂಬ ಪದ್ಧತಿ ಹಿಂದೆ ಇತ್ತು. ಈಗಲೂ ಕೆಲವರು ಇದನ್ನೇ ಅನುಸರಿಸುತ್ತಾರೆ. ಒಂದು ರೀತಿಯಲ್ಲಿ ತಾಯಿ ಮಗಳ ಸಂಬಂಧಕ್ಕೆ ಒತ್ತು ಕೊಟ್ಟಿದೆ ಈ ಪದ್ಧತಿ. ಹೆರಿಗೆ ಎಂದರೆ ಹೆಣ್ಣಿಗೆ ಒಂದು ರೀತಿಯ ಕಷ್ಟದ ಹಾಗೆಯೆ ಸುಖದ ಸಮಯ. ಹೆರಿಗೆಯ ನೋವು, ಮುಂದಾಗುವ ಮಗುವಿನ ಕನಸು ಇವೆರಡೂ ಅವಳನ್ನು ತಬ್ಬಿಬ್ಬು ಮಾಡಿಬಿಡುತ್ತದೆ. ಅಂತಹ ಸಮಯದಲ್ಲಿ ತಾಯಿಯ ಸಖ್ಯ, ಸಾಂತ್ವನ ಇವೆರಡು ಅವಳನ್ನು ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ, ಧೈರ್ಯಕೊಡುತ್ತದೆ. ಇದನ್ನು ಒಂದು ಪದ್ದತಿಯ ಮೂಲಕ ಆಚರಣೆಗೆ ತಂದಿದ್ದಾರೆ ನಮ್ಮ ಹಿರಿಯರು.
ಈ ಕವನದ ಸಾರಾಂಶ ಇದೇ . ಹೊಸದಾಗಿ ಮದುವೆಯಾದ ಗಂಡ ಹೆಂಡತಿ ಸುಖ ಸಂತೋಷದಿಂದ ವಾಸವಿದ್ದಾರೆ . ಈಗ ಹೆಂಡತಿ ಗರ್ಭಿಣಿ . ಅವಳನ್ನು ನೋಡಿಕೊಳ್ಳುವರು ಯಾರು ? ಯಾವುದೇ ಹೆಣ್ಣಿಗೆ ತಾಯಿಯ ಬಳಿ ಹೋಗಿ ಇರಬೇಕೆಂಬ ಆಸೆ ಇದ್ದೆ ಇರುತ್ತದೆ . ಈಗ ಹೆರಿಗೆಯ ನೆಪದಲ್ಲಿ ತಾಯಿಯ ಮನೆಗೆ ಹೋಗುವ ಸಮಯ ಬಂದಿದೆ. ಅವಳಿಗೋ ತಾಯಿಯ ಮನೆಗೆ ಹೋಗುವ ಸಂಭ್ರಮ, ಸಂತೋಷ. ಗಂಡನಿಗೆ ? ಅವಳ ಸೇವೆಯನ್ನು ತಾನು ಮಾಡಲಾರ, ಅವಳನ್ನು ಬಿಟ್ಟೂ ಇರಲಾರ . ಆದರೆ ಬೇರೆ ದಾರಿ ಇಲ್ಲದೆ ಅವಳನ್ನು ತವರು ಮನೆಗೆ ಕಳಿಸುತ್ತಾನೆ. ಇಂದಿನಂತೆ ಅಂದು ವಾಟ್ಸಾಪ್, ವಿಡಿಯೋ ಕಾಲ್ ಬಿಡಿ, ಲ್ಯಾಂಡ್ ಲೈನ್ ಸಹ ಅಪರೂಪವೇ. ಹೀಗಾಗಿ ಅಂಚೆಯ ಮೂಲಕವೇ ಎಲ್ಲಾ ವ್ಯವಹಾರಗಳು.
ಗಂಡ ತನ್ನ ತಂದೆ ತಾಯಿಯ ಜೊತೆ, ಸೋದರ ಸೋದರಿಯರ ಜೊತೆಗೆ ಇದ್ದರೆ ಹೆಂಡತಿಯ ಅಗಲುವಿಕೆ ಅಷ್ಟಾಗಿ ಗೊತ್ತಾವುದಿಲ್ಲ. ಆದರೆ ಏನೇನೋ ಕಾರಣಗಳಿಂದಾಗಿ ಗಂಡ ಹೆಂಡತಿ ಇಬ್ಬರೇ ಮನೆಯಲ್ಲಿದ್ದರೆ ಆಗ ಹೆಂಡತಿಯ ಅಗಲಿಕೆ ಬಹಳ ವೇದನೆಯನ್ನು ಕೊಡುತ್ತದೆ. ಸಾಮಾನ್ಯವಾಗಿ ಹೆರಿಗೆ ಎಂದರೆ ಮಗುವಿಗೆ ೫ ತಿಂಗಳಾಗುವವರೆಗೂ ಹೆಂಡತಿ ತವರಲ್ಲೇ ಇದ್ದು ಬರುತ್ತಾಳೆ. ವಿರಹಿ ಗಂಡನಿಗೆ ಒಂದೊಂದು ತಿಂಗಳು ಒಂದೊಂದು ವರ್ಷವಾದಂತೆ ಭಾಸವಾಗುತ್ತದೆ. ಹೆಂಡತಿಯಿಲ್ಲದ ಮನೆಯಲ್ಲಿ ಒಬ್ಬನೇ ಇರಬೇಕಾದ ಪರಿಸ್ಥಿತಿ ಗಂಡನಿಗೆ ಮೈ ಪರಚುಕೊಳ್ಳುವಂತಾಗುತ್ತದೆ. ಅದು ಸಿಟ್ಟಿನ ಮೂಲಕ ಹೆಂಡತಿಯ ಮೇಲೆ ತಿರುಗುತ್ತದೆ. ನೀನೇನು ಆರಾಮವಾಗಿ ಅಮ್ಮನ ಕೈಲಿ ಸೇವೆ ಮಾಡಿಸಿಕೊಂಡು ಚೆನ್ನಾಗಿ ತಿಂದುಕೊಂಡು ಸಂತೋಷವಾಗಿದ್ದಿಯ ಎಂದು ಅಸೂಯೆಯನ್ನು ತೆಗಳಿಕೆ, ಆಕ್ಷೇಪಣೆಯ ಮೂಲಕ ತೋರಿಸುತ್ತಾನೆ.
ಆಗ ಹೆಂಡತಿಯು, ಹಾಗೆನ್ನಬೇಡಿ, ಹಗಲೆಲ್ಲಾ ನನಗೆ ನಿಮ್ಮದೇ ಚಿಂತೆ, ಕನಸಲ್ಲೂ ನಿಮ್ಮದೇ ನೆನಪು; ನೀಲಾಕಾಶದಲ್ಲಿ ಚಂದ್ರ ಹಾಗು ರೋಹಿಣಿ ನಕ್ಷತ್ರಗಳನ್ನು ನೋಡಿದಾಗ ಅದು ನಾವಿಬ್ಬರೇ ಎಂಬ ಭಾವ ಬರುತ್ತದೆ ಎನ್ನುತ್ತಾಳೆ. ಅಮ್ಮ ಮಾಡುವ ಅಡುಗೆಯ ಆಸೆಗೆ ನಾನು ಇಲ್ಲಿ ಕುಳಿತಿಲ್ಲ, ಮಗುವಿಗೆ ೫ ತಿಂಗಳು ತುಂಬುತ್ತಿದೆ, ಇನ್ನು ಕೆಲವೇ ದಿನದಲ್ಲಿ ತಂಗಿಯ ಮದುವೆಯೂ ಇದೆ ಅದಕ್ಕಾಗಿ ಒಂದೆರೆಡು ದಿನ ಇದ್ದು ಬಂದು ಬಿಡುತ್ತೇನೆ, ನಾನು ತವರು ಅನ್ನುವ ಪಂಜರದ ಗಿಣಿಯಲ್ಲ ಸ್ವಲ್ಪ ಸಹಿಸಿಕೊಳ್ಳಿ, ಬಂದುಬಿಡುತ್ತೇನೆ ಎಂದು ಸಮಾಧಾನ ಮಾಡುತ್ತಾಳೆ.
ನಾನು ನಿಮ್ಮೊಂದಿಗೆ ಇದ್ದಾಗ ನೀವು ಎಷ್ಟು ಪ್ರಶಾಂತರಾಗಿ ನನ್ನ ಮೇಲೆ ಪ್ರೀತಿ ತೋರುತ್ತಿದ್ದಿರಿ, ಈಗ ಮಗುವಿನ ಹೆರಿಗೆಯ ಕಾರಣ ತವರಿಗೆ ಬಂದರೆ, ಹೂವನ್ನು ಹಾವಿನಂತೆ ಕಂಡು ನನ್ನ ಮೇಲೆ ಬಿರುನುಡಿಗಳನ್ನಾಡುವುದು ನಿಮಗೆ ತರವೇ? ಎಂದು ಪ್ರಶ್ನಿಸುತ್ತಾಳೆ.
ಚಿತ್ರದುರ್ಗದ ರೈಲು ನಿತ್ಯ ಮೈಸೂರಿಗೆ ಓಡಾಡುತ್ತದೆ, ಇನ್ನೊಂದು ಎರಡು ದಿನ ಕಾದುಬಿಡಿ ಬಂದುಬಿಡುತ್ತೇನೆ. ಹೊರಡವಾಗ ನಮ್ಮ ಸಂಪ್ರಾಯದಂತೆ ಸೋಬಲಕ್ಕಿಯನ್ನು ಇಟ್ಟು, ನಮ್ಮ ಮುದ್ದು ಹೆಣ್ಣು ಮಗುವಿಗೆ ರೇಷ್ಮೆ ಜರಿಯ ಲಂಗವನ್ನು ಹೋಲಿಸಿ ಹಾಕಿ ಕಳಿಸಿಬಿಡುತ್ತಾರೆ, ನನ್ನ ಹೆತ್ತವರನ್ನು ಯಾವುದೊ ಸಿಟ್ಟಿಗೆ ದೂರಬೇಡಿ, ಬೇಕಿದ್ದರೆ ಅವರೇ ನನ್ನನ್ನು ಕರೆದುಕೊಂಡು ಬಂದು, ಅವರ ತಪ್ಪಿಲ್ಲದಿದ್ದರೂ ಕ್ಷಮೆ ಕೇಳುತ್ತಾರೆ, ಸರಿಯೇ ಎಂದು ಸಮಾಧಾನ ಮಾಡುತ್ತಾಳೆ. ಇಲ್ಲಿ ಹೆಣ್ಣಿನ ತಂದೆಯ ಪರಿಸ್ಥಿತಿಯನ್ನು ನೆನೆದರೆ ಕಣ್ದುಂಬಿ ಬರುತ್ತದೆ.
ನಿಮ್ಮನ್ನು ಮರೆತುಬಿಟ್ಟಿದ್ದೇನೆ ಎಂದು ದೂರಬೇಡಿ. ನಮ್ಮ ಪುಟ್ಟ ಮಗು ಮುದ್ದಾಗಿ ಬೆಳೆದಿದೆ. ಅದನ್ನು ನೋಡಿದರೆ ನಿಮ್ಮ ಸಿಟ್ಟೆಲ್ಲವು ಕರಗಿಬಿಡುತ್ತದೆ. ಸಿಟ್ಟಾಗಬೇಡಿ, ಕೊರಗಬೇಡಿ, ಚುಚ್ಚು ಮಾತುಗಳಿಂದ ಆಕ್ಷೇಪಿಸಬೇಡಿ, ಇದೋ ಬಂದೆ ಬಿಡುತ್ತಿದ್ದೇನೆ ಎಂದು ಗಂಡನಿಗೆ ಮಾತುಕೊಡುತ್ತಾಳೆ.
ಬರೆಯುತ್ತ ಹೋದರೆ ಇನ್ನೂ ಸಾಕಷ್ಟು ಇವೆ. ಸಧ್ಯಕ್ಕೆ ಇಷ್ಟು ಇರಲಿ. ಒಂದು ಕವನದ ಮೂಲಕ ಎಷ್ಟೊಂದು ಸಂದೇಶಗಳು, ಎಷ್ಟೊಂದು ವಿಷಯಗಳ ಅರಿವು ನಮಗಾಗುವುದಲ್ಲವೇ? ಒಂದು ಸಂಸಾರದ ನೋವು ನಲಿವುಗಳನ್ನು ಕವನದ ಮೂಲಕ ತಿಳಿಯಪಡಿಸಿದ ಕೆ ಎಸ್ ನರಸಿಂಹಸ್ವಾಮಿ ಅವರಿಗೆ ಹೃತ್ಪೂರ್ವಕ ನಮಸ್ಕಾರಗಳು. - ಜಗದೀಶ ಚಂದ್ರ
THE LETTER FROM A WIFE
Our society has seen numerous transformations in recent years. Many of the customs that were prevalent fifty years or more ago are either changing or going extinct. Going to the mother's house to give birth to the first child was customary in the past. Additionally, it promoted a loving and caring attachment with the mother. The girl used to get some joy and contentment from this. However, in order to care for their daughter's pregnancy and delivery, the daughter's parents are now travelling overseas. At the time, landlines were a commodity, and neither mobile phones nor the internet were known. Letters sent through the post office were the only means of contact.
At this point, we are talking about K. S. Narasimha Swamy's poetry "Wife's Letter". The letter from the wife ended up becoming a poetry.
It used to be customary for the mother's house to be the site of the first birthing following marriage. This tradition is still observed by some. It does, in a sense, highlight the bond between mother and daughter. For a woman, pregnancy is a challenging period. She shudders at the thought of a future kid and the agony of childbirth. The mother's comfort and support in such a situation offers her incredible courage and mental strength. This circumstance has been established as a practice by our elders through a custom.
This is the poem's main idea. A newlywed couple is content with their lives. The wife now need a lot of care because she is pregnant. Who is going to look after her? Every lady wants to be with her mother during this challenging period. Now is the time to visit her mother's house. Going to her mother's house makes her very happy. However, her absence makes the husband feel lonely. Being unable to assist her or leave her puts him in a helpless situation. He is compelled to send his wife to live with her mother. Emails, video calls, WhatsApp, and other services were unheard of during that time, and landlines were extremely uncommon. All correspondence was done through the post office.
The wife doesn't notice the separation much if the husband lives with his parents and siblings. However, the wife's absence causes a great deal of anguish if, for some reason, only the husband and wife are at home. It is customary for a pregnant woman to remain at her mother's house until the baby is five months old. A long time apart makes the husband feel lonely and makes each month seem like a year. He experiences sadness, anger, and other uncomfortable emotions as a result of this feeling. He expresses all of his resentment and anxiety on his wife. He exhibits his jealousy by opposing and condemning his wife. He is envious because his wife is content at her mother's place, eating contentedly the delectable meal her mother has prepared, and not having to work. Her husband's annoying behaviour is causing her a great deal of misery. She responds to all of this in a letter.
Don't argue that I've forgotten you; I think about you constantly throughout the day and even in my dreams. It feels like we are two when I see the moon and stars in the azure sky. Don't assume that I'm consuming my mother's delectable cooking while I sit here. Our child is just five months old, and I will be returning back home shortly after my sister's wedding, which is in a few days.
You used to love me so peacefully when I was in our house with you, but now that I'm gone, you act like a snake against me. Only because of the birth and in accordance with tradition am I here at my mother's house.
Wait another two days, and I'll be back. The train from Chitradurga travels to Mysore daily. According to our custom, they put Sobalakki and deliver it through our cherished daughter as I leave my mother's house. They also think the child wearing a silk zari skirt is adorable. Don't be angry with my father. Even if it wasn't his fault, he will beg for pardon when he comes to drop me and the child if you wish. (Anybody will start crying at this point if they see the girl's father's situation.)
Don't think I've forgotten about you. Our baby has grown into a lovely child. All of your rage fades away when you see this adorable child. Don't worry, I'll be right back.
Through poetry, don't we learn a great deal about human connections, values, and messages? We should extend our sincere gratitude to Sri K. S. Narasimhaswamy for using poetry to capture the traditions, customs, and relationships of an Indian family. - Jagadeesha Chandra
ಹೆಂಡತಿಯ ಕಾಗದ - ಕೆ. ಎಸ್. ನರಸಿಂಹ ಸ್ವಾಮಿ
ಸಂಗೀತ – ಸಿ ಅಶ್ವಥ್ / ಕೀಬೋರ್ಡ್ - ಜಗದೀಶ ಚಂದ್ರ
K S Narasimha Swamy / C Ashwath / Keyboard - Jagadeesha Chandra
ತೌರ ಸುಖದೊಳಗೆನ್ನ ಮರೆತಿಹಳು ಎನ್ನದಿರಿ
ನಿಮ್ಮ ಪ್ರೇಮವ ನೀವೇ ಒರೆಯನಿಟ್ಟು
ನಿಮ್ಮ ನೆನಸೇ ನನ್ನ ಹಿಂಡುವುದು ಹಗಲಿನಲಿ
ಇರುಳಿನಲಿ ಕಾಣುವುದು ನಿಮ್ಮ ಕನಸು
ಬೃಂದಾವನದ ಹಣೆಗೆ ಕುಂಕುಮವನಿಡುವಾಗ
ಕಾಣುವುವು ಶ್ರೀತುಲಸಿ ಕೃಷ್ಣ ತುಲಸಿ
ನೀಲಾಂಬರದ ನಡುವೆ ಚಂದಿರನು ಬಂದಾಗ
ರೋಹಿಣಿಯು ಬೆಳಗುವಳು ಸನ್ನಿಧಿಯಲಿ || ತೌರ ||
ತಾಯಡಿಗೆ ರುಚಿಯೆಂದು ನಾನಿಲ್ಲಿ ಕುಳಿತಿಲ್ಲ
ಇನ್ನು ತಂಗಿಯ ಮದುವೆ ತಿಂಗಳಿಹುದು
ತೌರ ಪಂಜರದೊಳಗೆ ಸೆರೆಯಾದ ಗಿಣಿಯಲ್ಲ
ಐದು ತಿಂಗಳ ಕಂದ ನಗುತಲಿಹುದು || ತೌರ ||
ಕಣ್ಣೆದುರಿಗಿರುವಾಗ ನಿಮ್ಮ ಮನ ಉಕ್ಕುವುದು
ಕ್ಷೀರ ಸಾಗರದಂತೆ ಶಾಂತಿಯೊಳಗೆ
ಕಣ್ಣು ಮರೆಯಾದಾಗ ಹೂವಲ್ಲ ಹಾವೆಂದು
ಬಿರುನುಡಿಯ ನಾಡುವುದು ನಿಮಗೆ ತರವೇ
ಚಿತ್ರದುರ್ಗದ ರೈಲು ನಿತ್ಯವೂ ಓಡೋಡಿ
ಮೈಸೂರ ಸೇರುವುದು ನಾನು ಬಲ್ಲೆ
ನಾಳೆ ಮಂಗಳವಾರ ಮಾರನೆಯ ದಿನ ನವಮಿ
ಆಮೇಲೆ ನಿಲ್ಲುವೇನೆ ನಾನು ಇಲ್ಲೇ || ತೌರ ||
ಸೋಬಲಕ್ಕಿಯನಿಟ್ಟು ಹೂಮುಡಿಸಿ ಕಳಿಸುವರು
ಕಂದನಿಗೆ ಹೊಸ ಜರಿಯ ಲಂಗವುಡಿಸಿ
ತಂದೆಯವರೇ ಬಂದು ತಪ್ಪಾಯಿತೆನ್ನುವರು
ಹೆಣ್ಣು ಹೆತ್ತವರನ್ನು ದೂರಬೇಡಿ
ಮರೆತಿಹಳು ಎನ್ನದಿರಿ, ಕಣ್ಮರೆಯ ತೋಟದಲಿ
ಅಚ್ಚಮಲ್ಲಿಗೆಯರಳು ಬಿರಿಯುತಿಹುದು
ಬಂದುಬಿಡುವೆನು ಬೇಗ, ಮುನಿಯದಿರಿ, ಕೊರಗದಿರಿ
ಚುಚ್ಚದಿರಿ ಮೊನೆಯಾದ ಮಾತನೆಸೆದು || ತೌರ ||
ಕೋಪವೇಕೆ ಕೋಪವೇಕೆ ಅಜ್ಜಿ / ಬಿ ಕೆ ಸುಮಿತ್ರಾ, ಬಿ ಲತಾ / ವಿಜಯಭಾಸ್ಕರ್ / ಪತಿಯೆದೈವ / ಕೀಬೋರ್ಡ್ - ಜಗದೀಶ ಚಂದ್ರ
ಅಜ್ಜಿಗೆ ಮೊಮ್ಮೊಕ್ಕಳು ಎಂದರೆ ಬಲು ಪ್ರೀತಿ. ಕಿಟ್ಟು, ಪುಟ್ಟು ಎಂಬ ಈ ಎರಡು ಮಕ್ಕಳಿಗೂ ಅಜ್ಜಿ ಎಂದರೆ ಪಂಚಪ್ರಾಣ. ಆದರೆ ಮಕ್ಕಳು ಮಕ್ಕಳೇ. ಏನೋ ತರಲೆ ಮಾಡಿ ಅಜ್ಜಿಯನ್ನು ಸಿಟ್ಟಿಗೆಬ್ಬಿಸಿಬಿಟ್ಟಿವೆ. ಅದಕ್ಕೆ ಅಜ್ಜಿ ಮುಖ ಊದಿಸಿ ಕೂತಿದ್ದಾಳೆ. ಕಿಟ್ಟು ಪುಟ್ಟು ತಮ್ಮ ಬುದ್ಧಿಯನ್ನೆಲ್ಲ ಖರ್ಚು ಮಾಡಿ ಅಜ್ಜಿಯನ್ನು ರಮಿಸಲು, ಕೋಪ ತಾಪ ಸಾಕು, ಬಿಗುಮಾನ ಬಿಟ್ಟು ಮೊದಲಿನಂತಿರು ಎನ್ನುತ್ತಿದ್ದಾರೆ. ತಟ್ಟೆ ತುಂಬಾ ಸಿಹಿ ತಂದಿದ್ದೇವೆ, ಯಾರಿಗೂ ಕಾಣದಂತೆ ಗುಟ್ಟಾಗಿ ತಿನ್ನು, ತಪ್ಪನ್ನೆಲ್ಲ ಒಪ್ಪಿಕೊಂಡು ನಿನ್ನ ಕೈಲಿ ಕೆನ್ನೆಗೆ ಏಟು ತಿಂದು ನಿನ್ನ ಸೇವೆ ಮಾಡುತ್ತೇವೆ ಎಂದೆಲ್ಲಾ ಹೇಳಿ ರಮಿಸಲು ನೋಡುತ್ತಿದ್ದಾರೆ. ಇದೇ ಹಾಡಿನ ಭಾವಾರ್ಥ. ಹಿಂದೆ ಮಕ್ಕಳ ಹಾಡು ಹಾಡಲು ಬಿ ಕೆ ಸುಮಿತ್ರಾ ಹಾಗು ಬೆಂಗಳೂರು ಲತಾ ಅವರನ್ನು ಆಯ್ಕೆ ಮಾಡುತ್ತಿದ್ದರು. ಇಲ್ಲಿಯೂ ಅವರಿಬ್ಬರೇ ಬಹಳ ಮಧುರವಾಗಿ ಹಾಡಿದ್ದಾರೆ. ಸಂಗೀತ ವಿಜಯಭಾಸ್ಕರ್ ಅವರದು, ಸಾಹಿತ್ಯ ಆರ್ ಏನ್ ಜಯಗೋಪಾಲ್ ಅವರದು, ಚಿತ್ರ ಪತಿಯೇ ದೈವ. ಇದೆ ಹಾಡನ್ನು ಹಿಂದಿಯಲ್ಲಿ ದಾದಿಯಮ್ಮ ದಾದಿಯಮ್ಮ ಮಾನ್ ಜಾವ್ ಎಂದು ಆಶಾ ಭೊಂಸ್ಗೆ ಹಾಗು ಕಮಲ್ ಬರೋಟ್ ಅವರು ಹಾಡಿದ್ದಾರೆ. ಸಂಗೀತ ನೀಡಿರುವವರು ರವಿ ಅವರು.
Kopaveke Ajji? Grandkids' song / B K Sumitra, B Latha / Vijayabhaskar / R N Jayagopal / Keyboard - Jagadeesha Chandra
Grandma adores her grandchildren. Kittu and Puttu are the two children she is the grandmother to. However, kids can be incredibly mischievous. The grandmother has become irate due to some mischievous behaviour. Grandma's red face is an expression of her rage. To satisfy their grandmother, Kittu Puttu goes to great lengths. Grandmother is kindly asked to restrain her temper. They ask that she return to her regimen and get over her stubbornness. They bring a sweet, which they beg Grandmother to eat. Grandmother is asked to consume the sweets in secret so that no one can see her because she is not allowed to eat sweets. By striking their cheeks, they also ask their grandmother to forgive them for their errors. This is the song's main idea.
This adorable song, which was composed by R N Jayagopal and sung by B K Sumitra and Bengaluru Latha in the film "Patiye Daiva," is about children attempting to convince their grandma to stop being so stubborn.
Renowned vocalists Bengaluru Latha and BK Sumitra were selected to perform children's tunes. Both of them did a fantastic job rendering this song. Vijayabaskar is the composer, and R. N. Jayagopal is the one who wrote of the lyrics.
Asha Bhosle and Kamal Barot sing the same song from the film Gharanaa. Ravi is the music director. The song title is "Dadiyamma Dadiyamma maan jaav".
ಕೋಪವೇಕೆ ಕೋಪವೇಕೆ ಅಜ್ಜಿ
ಈ ತಾಪವೇಕೆ ಮನಸಿಗೆ ಅಜ್ಜಿ
ಬಿಡು ನಿನ್ನ ಕೋಪ , ತಾಳು ಶಾಂತ ರೂಪಾ
ಬಿಗುಮಾನ ಬಿಟ್ಟು ನೀ ಮಾತಾಡಜ್ಜಿ //
ಪುಟ್ಟ ಪಾಪ ಹುಟ್ಟಿತೆಂದು ಲಡ್ಡು ತಂದೆವು
ತಟ್ಟೆ ತುಂಬಾ ಸಿಹಿ ತಿಂಡಿ ಕೊಂಡು ಬಂದೆವು
ಸೊಟ್ಟ ಮುಖವನ್ನು ಬಿಟ್ಟು ಕಿಟ್ಟು ಪುಟ್ಟ ಮಾತ ಕೇಳಿ
ಗುಟ್ಟಿನಿಂದ ಹೊಟ್ಟೆ ತುಂಬಾ ತಿಂದು ಬಿಡಜ್ಜಿ //
ತಪ್ಪುಗಳನ್ನೆಲ್ಲ ನಾವು ಒಪ್ಪಿಕೊಂಡೆವು
ನಮ್ಮ ತಪ್ಪನೆಲ್ಲ ಮನ್ನಿಸೆಂದು ಬೇಡಿಕೊಂಬೆವು
ನಿನ್ನ ಮಾತ ಕೇಳುವೆವು , ನಿನ್ನ ಸೇವೆ ಮಾಡುವೆವು
ಕೆನ್ನೆಗೇಟು ಹಾಕು ಎಂದು ಕೇಳಿಕೊಂಬೆವು
ಮನವೇ ಮಂದಿರ ನ್ಯಾಯ ದೇಗುಲ / Manave Mandira
ಗಾಯಕರು: ಪಿ.ಬಿ.ಶ್ರೀನಿವಾಸ್ / ಸಂಗೀತ : ವಿಜಯಭಾಸ್ಕರ್ / ಸಾಹಿತ್ಯ: ನಂಜರಾಜ್ ಅರಸ್ / ಚಿತ್ರ: ತೂಗುದೀಪ / ಕೀಬೋರ್ಡ್ - ಜಗದೀಶ ಚಂದ್ರ
P B Srinivas / Music - Vijaya Bhaskar /Lyrics - Nanjaraj Urs / Film - Thoogu Deepa / Keyboard - Jagadeesha Chandra
P B Srinivas, who has a melodic voice in some of the oldest melody songs, sings this song, which was composed as well by Vijaya Bhaskar. Nanjaraja Aras is the lyricist. This song is based on the Kalawati raga. It is equivalent to the Valachi Raga in Carnatic music. The lyrics is equally appropriate to a very appealing tune.
This poem advises us how to be a good person to lead an excellent life. We should be mentally calm, and our good deeds are like a temple, our inner beauty is like God, and our love and devotion are like lamps.
We should value mercy, love, affection, and proper norms and regulations in order to have a decent life. Our body and mind turn into a temple when we are away from distrust, envy, and fraud aggression.
If we believe that everyone around us is equal, our hearts will be filled with love for God. This is what the poem wishes to convey.
ಹಳೆಯ ಕೆಲವು ಮಧುರ ಹಾಡುಗಳಲ್ಲಿ ಮಧುರ ಕಂಠದ ಗಾಯಕ ಪಿ ಬಿ ಶ್ರೀನಿವಾಸ್ ಅವರು ಹಾಡಿರುವ, ವಿಜಯಭಾಸ್ಕರ್ ಅವರು ಸಂಗೀತ ನೀಡಿರುವ ಈ ಹಾಡು ಸಹ ಒಂದು. ಸಾಹಿತ್ಯ ನಂಜರಾಜ ಅರಸ್ ಅವರದು. ಇದು ಕಲಾವತಿ ಎಂಬ ರಾಗದ ಆಧಾರಿತ ಹಾಡು. ಕರ್ನಾಟಕ ಸಂಗೀತದಲ್ಲಿ ಇದು ವಲಚಿ ಎಂಬ ರಾಗಕ್ಕೆ ಸಮಾನಾಂತರವಾಗಿದೆ. ಬಹಳ ಮಧುರವಾದ ರಾಗ ಅಷ್ಟೇ ಸೊಗಸಾಗಿ ಹಾಡಿಗೆ ಅಳವಡಿಸಿದ್ದಾರೆ.
ಒಳ್ಳೆಯ ಬದುಕನ್ನು ಸಾಗಿಸಲು ನಾವು ಹೇಗೆ ಇರಬೇಕು ಎಂಬ ಸಂದೇಶವನ್ನು ಈ ಕವನ ನೀಡುತ್ತದೆ. ಮನಸ್ಸು ಚೆನ್ನಾಗಿರಬೇಕು, ನ್ಯಾಯಯುತವಾದ ನಡವಳಿಕೆ ಮಂದಿರವಾದರೆ ನಮ್ಮ ಅಂತರಂಗದ ಚೆಲುವು ದೇವರಾಗಿ ನಾವು ತೋರುವ ಪ್ರೀತಿಯೇ ನಂದಾದೀಪವಾಗುತ್ತದೆ.
ಜೀವನದಲ್ಲಿ ಕರುಣೆಗೆ ಮಮತೆಗೆ, ಒಳ್ಳೆಯ ನೀತಿ ನಿಯಮಗಳಿಗೆ ಸ್ಥಾನವಾಗಿದ್ದರೆ ಅದು ಸಿಹಿ ತುಂಬಿದ ಜೇನುಗೂಡಾಗುತ್ತದೆ. ಸಂಶಯ, ಅಸೂಯೆ, ವಂಚನೆ ಹಿಂಸೆ ಇವುಗಳಿಂದ ದೂರವಿದ್ದರೆ ನಮ್ಮ ದೇಹ ಮನಸ್ಸುಗಳೇ ಒಂದು ದೇವಾಲಯವಾಗುತ್ತದೆ.
ನಮ್ಮ ಸುತ್ತಮುತ್ತಲಿರುವ ಎಲ್ಲರೂ ಒಂದೇ ಎಂಬ ಭಾವವು ನಮ್ಮಲ್ಲಿದ್ದರೆ ಆಗ ನಮ್ಮ ಹೃದಯವೇ ದೇವನಿರುವ ಪ್ರೇಮಮಂದಿರವಾಗುತ್ತದೆ. ಇದೆ ಈ ಕವನದ ಆಶಯ.
ಮನವೇ ಮಂದಿರ ನ್ಯಾಯ ದೇಗುಲ
ಚೆಲುವೆ ದೇವರು ಒಲವೇ ದೀವಿಗೆ
ಮನವೇ ಮಂದಿರ.......ಆಆಆ
ಕರುಣೆ ಮಮತೆ ನೀತಿ ನಿಯಮ
ಇರಲು ಬದುಕು ಜೇ..ನು ಗೂಡು
ಬೇಡ ಸಂಶಯ ಭ್ರಾಂತಿ ವಂಚನೆ
ಹಿಂಸೆ ತುಂಬಿದ ವಿಷದ ವಚನ
ಮನವೇ ಮಂದಿರ.......ಆಆಆ
ನಾನು ನೀನು ಅವನು ಇವಳು
ಎಲ್ಲ ಒಂದೇ ತಾಯ ಸುತರು
ಎಂಬ ಭಾವವು ಬಂದ ಹೃದಯವು
ದೇವನಿರುವ ಪ್ರೇಮ ನಿಲಯ
ಮನವೇ ಮಂದಿರ....ಆಆಆ....ಆಆಆ
6 45 137 329 Da 291 240 77VSa 85
Song from film Shubhamangala / Vijayabhaskar / Vijayanarasimha / Vani Jayram / Singers - Lakshmi, Soubhagya, Geetha, Jayashree / Keyboard - Jagadeesha Chandra
ಶುಭಮಂಗಳ ಚಿತ್ರದ ಹಾಡು / ವಿಜಯಭಾಸ್ಕರ್ / ವಿಜಯನಾರಸಿಂಹ / ವಾಣಿ ಜಯರಾಮ್ / ಗಾಯಕಿಯರು - ಲಕ್ಷ್ಮಿ, ಸೌಭಾಗ್ಯ, ಗೀತಾ, ಜಯಶ್ರೀ / ಕೀಬೋರ್ಡ್ - ಜಗದೀಶಚಂದ್ರ
ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು
ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು
ಗುಲಾಮಳಿವಳಲ್ಲಾ.. ಸಲಾಮು ಹೊಡೆಯೊಲ್ಲಾ!
ಕುತಂತ್ರವಿಲ್ಲದೆ.. ಅತಂತ್ರವಾಗದೆ.. ಸ್ವತಂತ್ರಳಾಗಿಹಳು!
ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು
xxxxxxxxxxxxxxxxxxxxxxxxxxxxxxxxx
ನಾಗರೀಕತೆಯ ನಾಟಕದಲ್ಲಿ ನಟಿಸುವ ಹೆಣ್ಣಲ್ಲಾ!
ಆದುನಿಕತೆಯ ಅಹಂಕಾರದಲಿ ಮೆರೆಯುವ ಹೆಣ್ಣಲ್ಲಾ!
ಆದರ್ಶವಿಲ್ಲದ ಅಂಧತೆಯಲ್ಲಿ ಅಳಿಯುವ ಹೆಣ್ಣಲ್ಲಾ! xxxxxxxx
ವಿವೇಕ ಮೀರದ, ವಿಚಾರಧಾರೆಯ, ವಿಬಿನ್ನ ರುಚಿಯವಳು!
ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು
xxxxxxxxxxxxxxxxxxxxxxxxxxxxxxxxxxxxxxxxxx
ಮಾನಾಭಿಮಾನಕೆ ಮಾನ್ಯತೆ ನೀಡುವ ಮಾನಿನಿ ಈ ಹೆಣ್ಣು!
ಮನತನ ಗೌರವ, ಮಂಗಳ ದೀಪವ ಬೆಳುಗುವಳೀ ಹೆಣ್ಣು!
ದುಡಿಮೆಯೆ ದೇವರು ಎನ್ನುವ ಮಂತ್ರದ ಮಾಂತ್ರಿಕಳೀ ಹೆಣ್ಣೂ!xxxxx
ವಿಲಾಸ ಜೀವನ ವಿಚಿತ್ರ ವೇಷಕೆ ವಿರೋಧಿಯಾಗಿಹಳು!
ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು
xxxxxxxxxxxxxxxxxxxxxxxxxxxxxxxxxxxxxxxxxxxxx
ರಾಜತಂತ್ರದ ಚದುರಂಗದಲಿ ಚಕಮಕ ಚತುರೆ ಈ ಹೆಣ್ಣು!
ಬಾಳಿನ ಬಗೆ ಬಗೆ ಬಣ್ಣದ ಬದುಕಿನ ನಾಯಕಿ ಈ ಹೆಣ್ಣು!
ವಿದ್ಯಾ ಬುದ್ಧಿಯ, ಸಿದ್ಧಿ-ಪ್ರಸಿದ್ಧಿಯ ಸಾದಕಳೀ ಹೆಣ್ಣೂ! xxxxxxxxx
ವಿಷೇಶ ಪ್ರತಿಭೆಯ ವಿಶಾಲ ಕೀರ್ತಿಯ ವಿಜೆತಳಾಗಿಹಳು!
ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು
ಈ ಶತಮಾನದ ಮಾದರಿ ಹೆಣ್ಣು ಸ್ವಾಭಿಮಾನದ ಸಾಹಸಿ ಹೆಣ್ಣು
ಗುಲಾಮಳಿವಳಲ್ಲಾ.. ಸಲಾಮು ಹೊಡೆಯೊಲ್ಲಾ!
ಕುತಂತ್ರವಿಲ್ಲದೆ.. ಅತಂತ್ರವಾಗದೆ.. ಸ್ವತಂತ್ರಳಾಗಿಹಳು!
ಈ ಶತಮಾನದ ಮಾದರಿ ಹೆಣ್ಣು, ಸಾಹಸಿ ಹೆಣ್ಣು
ಉದುರು ಉದುರು ಮಲ್ಲಿಗೆ ಚದುರು ನಮ್ಮ ಕೇರಿಗೆ
ಚದುರಿದರೆ ಶಿವನ ಪಾದ ಸೇರು ಮಲ್ಲಿಗೆ //
ಬೆಟ್ಟದೊಳು ಮಲ್ಲಿಗೆ ನೀ ಹುಟ್ಟದಿರು ಮಲ್ಲಿಗೆ
ಹುಟ್ಟಿದರೆ ಶಿವನ ಪಾದ ಸೇರು ಮಲ್ಲಿಗೆ ||ಉದುರು||
ಹಳ್ಳದೊಳು ಮಲ್ಲಿಗೆ ನೀ ಅರಳದಿರು ಮಲ್ಲಿಗೆ
ಅರಳಿದರೆ ಶಿವನ ಪಾದ ಸೇರು ಮಲ್ಲಿಗೆ
ತೋಟದೊಳು ಮಲ್ಲಿಗೆ ನೀ ದಾಟದಿರು ಮಲ್ಲಿಗೆ
ದಾಟಿದರೆ ಶಿವನ ಪಾದಾ ಸೇರು ಮಲ್ಲಿಗೆ ||ಉದುರು||
ದಿಬ್ಬದೊಳಗೆ ಮಲ್ಲಿಗೆ ಹಬ್ಬದಿರು ಮಲ್ಲಿಗೆ
ಹಬ್ಬಿದರೆ ಶಿವನ ಪಾದ ಸೇರು ಮಲ್ಲಿಗೆ //
ಬಾಗಿಲೊಳು ಮಲ್ಲಿಗೆ ನೀ ಬಳುಕದಿರು ಮಲ್ಲಿಗೆ
ಬಳುಕಿದರೆ ಶಿವನ ಪಾದ ಸೇರು ಮಲ್ಲಿಗೆ //
ತವರೂರ ಮನೆ ನೋಡ ಬಂದೆ ತಾಯಿ ನೆನಪಾಗಿ ಕಣ್ಣೀರ ತಂದೆ //
ಹತ್ತು ಹದಿನಾಲ್ಕು ವರುಷ ಗಳ್ಹಿಂದೆ ಹೆತ್ತ ತಾಯ್ತಂದೆ ಪ್ರೀತಿಯ ಹಿಂದೆ
ಮುತ್ತಿನಂತೆ ಜೋಪಾನವಾಗಿ ಬಾಳಿದೆ ಅದು ಎತ್ತ ಹೋದರು ಕನಸಾಗಿದೆ //
ಬಾಗಿಲ ಮುಂದೆ ರಂಗೋಲಿ ಬಾಗಿ ಇಡುತ್ತಿದ್ದೆ ನಾನಾ ತರದಲ್ಲಿ
ಅದು ಹೇಗೆ ಮರೆಯಲಿ ಮನಸಲಿ ಅದು ಮರೆಯಾದು ಈ ಬಾಳಿನಲ್ಲಿ //
ಅತ್ತಿಗೆ ಕೈಗೊಂಬೆ ಅಣ್ಣ ಎತ್ತಿ ಮುದ್ದಾಡಿದಾ ತಂಗಿ ಮರೆತ
ಅಣ್ಣ ಕಣ್ಣೆತ್ತಿ ಸಹ ನೋಡಬಾರದೇ ತಂಗಿ ಬಾರಿತ್ತಾ ಎನಬಾರದೇ //
ಅಣ್ಣನ ಹೆಂಡತಿ ನೋಡಿ ಕಣ್ಸನ್ನೆ ಮಾಡಿದಳೆನ್ನ ನೋಡಿ
ಅಣ್ಣ ಮಾತಾ ನಾಡಿಸಿದವಳ ಸೇರಿದ ತನ್ನ ಸಿರಿಯಲ್ಲಿ ತಾನೊಡಗೂಡಿದ //
ಶಿವನೇ ನಾ ಕೈಮುಗಿದು ಬೇಡುವೆ ಸಿರಿ ಸಂಪತ್ತು ಕೊಡು ನಮ್ಮಣ್ಣಗೆ
ತಾಯೆ ಜಗದಂಬೆ ಕೈಮುಗಿದು ಬೇಡುವೆ ತಾಯೆ ಕರ್ಪುರದಾರತಿ ಬೆಳಗುವೆ //
ಮಧುಕೌಂಸ್ ರಾಗ Sa R89 spd100 T280L291 Split T355L208
ಕವನದ ಶೀರ್ಷಿಕೆ - ಆಸೆ , ರಚನೆ - ಜಗದೀಶ ಚಂದ್ರ
ಇರಬೇಕು ಒಳ್ಳೆಯಾ ಆಸೆ
ಇರದಿರಲಿ ಕೆಟ್ಟದೀ ಆಸೆ
ಅತಿ ಆಸೆಪಟ್ಟು ಗತಿ ಕೇಡು ಆಗಿ
ಸಿಕ್ಕುವುದು ಬರಿ ನಿರಾಸೆ
ಬೇಡ ಬೇಡ ಅತಿ ಆಸೆ
ಆಗುವುದು ದುಷ್ಟರಾ ಆಸೆ
ಅತಿ ದುಷ್ಟ ಆಸೆ ಭ್ರಷ್ಟನ್ನ ಮಾಡಿ
ಬಾಳನ್ನೆ ನರಕ ಮಾಡ್ತು
ಆ ಆ ಆ ... ಆ ಆ ಆ ..ಆ ಆ ಆ
ಹಣವ ಮಾಡುವಾ ಆಸೆ
ದುಪ್ಪಟು ಪಡೆಯುವಾ ಆಸೆ
ಇಂಥ ಆಸೆಯು ಹಾಳು ಮಾಡಿಸಿತು
ಬದುಕು ಆಯ್ತು ಬರಿ ಗೋಳು
ಅಯ್ಯೋ ಇಂಥ ಗೋಳಿನ ಬಾಳು
ಕೆಟ್ಟ ಮಾರ್ಗ ವಿ ದುರಾಸೆ
ಅದಕೆಂದು ಅಂತ್ಯವೇ ಇಲ್ಲ
ಅಂತ ಮಾರ್ಗದಲಿ ನೀವು ಹೋದರೆ
ಭ್ರಷ್ಟ ದುಷ್ಟ ಎಂಬ ಬಿರುದು
ಅಯ್ಯೋ ಇಂಥ ಹಣೆಯ ಪಟ್ಟಿ
ಪಡೆದು ಏಕೆ ಬದುಕಬೇಕು
ಆಸೆ ಬದುಕಿಗೆ ವರವು
ಈ ದುರಾಸೆ ಬಾಳಿಗೆ ಶಾಪ
ಇಂಥ ಶಾಪಕೆ ಬಲಿಯಾಗಿ ಹೋದರೆ
ದಣಿವುದಷ್ಟೇ ನಮಗೆ ಸಿಗುವ ಭಾಗ್ಯ
ನಮಸ್ಕಾರ - ಇಂದಿನ ಸಾಹಿತ್ಯ ಚಾವಡಿಗೆ ಒಂದು ಕವನ
ಮೋಸದ ಹಳ್ಳಿಯ ಕಿಂದರಿ ಜೋಗಿ / PIED PIPER OF CUNNINGRAMA
ರಚನೆ - ಬಿ ಎಸ್ ಜಗದೀಶ ಚಂದ್ರ / Written by - B S Jagadeesha Chandra
I have slightly modified the German folktale "Pied Piper of Hamelin" and written. Because the cats were frequently bothersome, the residents of that dishonest community either killed them or drove them out. They exterminated every snake in the village after discovering one somewhere. The consequences of this action were unknown to them. They don't know anything about environmental balance or ecological significance. Rats became more prevalent in the settlement as a result of the cats and snakes being extinct. Rats proliferated to the point where the hamlet was overrun by them. The rodents were unafraid and caused the inhabitants all kinds of hardships. The plague illness has claimed many lives. The people were tired of these incidents and made the decision to put a stop to them by rewarding the individual who eliminates the rat problem with a substantial present.
Nobody has ever been prepared to tackle such an unachievable endeavour. As it happened, a Jogi who played the kindari pipe came and said, "I'll get rid of all the rats and give me the prize." The people promised, "You chase away the rats first and then we will definitely give the reward,"
Jogi pulled his pipe out of his bag and let out a sort of melody. This song drew all the rats out, and they all followed him. After bringing them to the river, he let them to jump into it. As a result, all of the rats perished or were carried away by the river. Jogi returned to the village after taking this step. He asked the villagers to reward him because he completed the task satisfactorily. "You have just played the pipe, which is not at all a tough task," the naive and dishonest peasants stated. As a result, they were unwilling to provide the prize in accordance with the contract. Jogi was instructed to leave. Jogi, enraged, made the decision to teach a proper lesson.
Now Jogi pulled the pipe out of his bag once again and played a lovely eulogy. Every child in the village came out and followed him after hearing this lovely tune. As though under hypnosis, they followed him. Nobody could stop them from doing this. They all vanished after he led them to a location on the hill. The villagers ran up behind Jogi and the kids, but they were unable to reunite with their kids. Their betrayal has cost the disgruntled peasants dearly. The kids who followed Jogi arrived at a realm of fairies and were content there forever.
Maintaining the environment and staying true to the natural balance are the lessons to be learnt. The second lesson is to keep your word and avoid dishonesty.
Please give your comments and share this story, song with others and encourage.
"ಪೈಡ್ ಪೈಪರ್ ಆಫ್ ಹ್ಯಾಮ್ಲಿನ್" ಎಂಬ ಜರ್ಮನಿಯ ಜಾನಪದ ಕಥೆಯನ್ನು ಸ್ವಲ್ಪ ಮಾರ್ಪಡಿಸಿ ಕನ್ನಡದಲ್ಲಿ ಬರೆದಿದ್ದೇನೆ. ಮೋಸದ ಆ ಹಳ್ಳಿಯ ಜನರು ಬೆಕ್ಕುಗಳು ಹೆಚ್ಚಾಗಿ ಕಾಟ ಕೊಡುತ್ತಿವೆ ಎಂದು ಅವುಗಳನ್ನೆಲ್ಲ ಕೊಂದರು ಅಥವಾ ಓಡಿಸಿಬಿಟ್ಟರು. ಎಲ್ಲೋ ಒಂದು ಕಡೆ ಹಾವು ಕಂಡಿತೆಂದು ಹಾವುಗಳನ್ನೆಲ್ಲ ಹುಡುಕಿ ಹುಡುಕಿ ಕೊಲ್ಲಿಸಿದರು. ಇದರಿಂದ ಏನು ಪರಿಣಾಮ ಆಗಬಹುದು ಎಂದು ಅರಿವಿಲ್ಲದೇ ಮಾಡಿದ್ದ ತಿಳಿಗೇಡಿ ಕೆಲಸ ಇದಾಗಿತ್ತು. ಪರಿಸರ ಸಮತೋಲನದ ಪ್ರಜ್ಞೆ ಅವರಿಗಿರಲಿಲ್ಲ. ಬೆಕ್ಕು ಹಾವುಗಳ ಕಣ್ಮರೆಯಿಂದ ಆ ಹಳ್ಳಿಯಲ್ಲಿ ಇಲಿಗಳ ಸಂತತಿ ವೃದ್ಧಿಸಿತು. ಎಷ್ಟು ವೃದ್ಧಿಸಿತೆಂದರೆ ಎಲ್ಲಿ ನೋಡಿದರು ಇಲಿಗಳೇ, ಯಾವುದೇ ಹೆದರಿಕೆಯಿಲ್ಲದೆ ರಾಜರೋಷದಿಂದ ಮೆರೆದವು. ಇದರಿಂದ ರೋಗಗಳು ಹರಡಿ ಅನೇಕ ಜನರು ಸತ್ತರು. ಇನ್ನು ಸುಮ್ಮನಿರಲು ಸಾಧ್ಯವಿಲ್ಲ ಎಂದು ಇಲಿಗಳನ್ನು ನಿರ್ಮೂಲನ ಮಾಡಿದವರಿಗೆ ನಿಧಿಯನ್ನು ಕೊಡುತ್ತೇವೆ ಎಂದು ಡಂಗುರ ಸಾರಿದರು.
ಇಂತಹ ಅಸಾಧ್ಯದ ಕೆಲಸಕ್ಕೆ ಯಾರೂ ಮುಂದೆ ಬರಲಿಲ್ಲ. ಅದೃಷ್ಟಕ್ಕೆ ಕಿಂದರಿ ನುಡಿಸುವ ಜೋಗಿಯೊಬ್ಬನು ಬಂದು ನಾನು ಎಲ್ಲಾ ಇಲಿಗಳನ್ನು ಓಡಿಸುವೆ, ನನಗೆ ಬಹುಮಾನದ ನಿಧಿಯನ್ನು ಕೊಡಿ ಎಂದು ಕೇಳಿದ. ನೀನು ಮೊದಲು ಇಲಿಗಳನ್ನು ಓಡಿಸು, ನಂತರ ನಾವು ಖಂಡಿತ ಬಹುಮಾನವನ್ನು ಕೊಡುತ್ತೇವೆ ಎಂದು ಮಾತುಕೊಟ್ಟರು ಹಳ್ಳಿಯ ಜನ.
ಜೋಗಿಯು ತನ್ನ ಕಿಂದರಿಯನ್ನು ಹೊರತೆಗೆದು ಒಂದು ರೀತಿಯ ಸ್ವರವನ್ನು ಹೊರಡಿಸಿದ. ಅದಕ್ಕೆ ಮರುಳಾಗಿ ಮೋಡಿಗೊಳಗಾದವರಂತೆ ಎಲ್ಲಾ ಇಲಿಗಳು ಹೊರಗೆ ಬಂದು ಅವನ ಹಿಂದೆ ಹೊರಟವು. ಅವನು ಕಿಂದರಿ ನುಡಿಸುತ್ತ ಅವುಗಳನ್ನು ನದಿಯ ಬಳಿಗೆ ಕರೆದುಕೊಂಡು ಹೋಗಿ ಅವನ್ನು ನದಿಯಲ್ಲಿ ಧುಮುಕುವಂತೆ ಮಾಡಿದ. ಹೀಗೆ ಇಲಿಗಳನ್ನೆಲ್ಲ ಕೊಂದು ಮರಳಿ ಹಳ್ಳಿಗೆ ಬಂದು ಬಹುಮಾನವನ್ನು ಕೊಡಿ ಎಂದು ಕೇಳಿದ. ಜಿಪುಣರು, ಮೋಸಗಾರರೂ ಆಗಿದ್ದ ಆ ಹಳ್ಳಿಯವರು, ನೀನು ಕೇವಲ ಕಿನ್ನರಿ ಊದಿದೆ, ಏನೂ ಕಷ್ಟವನ್ನೇ ಪಡಲಿಲ್ಲ, ನಿನಗೇಕೆ ಹಣ ಕೊಡಬೇಕು, ಕೊಡುವುದಿಲ್ಲ ಮುಂದೆ ಹೋಗು ಎಂದುಬಿಟ್ಟರು. ಬೇಸರ ಪಟ್ಟ ಆ ಜೋಗಿಯು ನಿಮಗೆ ಸರಿಯಾಗಿ ಪಾಠ ಕಲಿಸುತ್ತೇನೆ ಎಂದು ಪಣ ತೊಟ್ಟ.
ಈಗ ಜೋಗಿ ಮತ್ತೆ ಕಿಂದರಿಯನ್ನು ಹೊರತೆಗೆದು ಹೊಸ ರೀತಿಯ ಮಧುರ ಸ್ವರ ಹೊರಡಿಸಿದ. ಈ ಹಾಡಿಗೆ ಮರುಳಾಗಿ ಹಳ್ಳಿಯ ಮಕ್ಕಳೆಲ್ಲಾ ಕುಣಿಯುತ್ತ ಅವನ ಹಿಂದೆ ಬಂದವು. ಜೋಗಿ ಹೋದ ಕಡೆಗೆ ಮೋಡಿಗೊಳಗಾದವರಂತೆ ಸಾಗಿದವು. ಯಾರೂ ಅವರನ್ನು ತಡೆಯಲು ಆಗಲೇ ಇಲ್ಲ. ಜೋಗಿ ಅವರನ್ನೆಲ್ಲ ಗುಡ್ಡದ ಮೇಲಿನ ಒಂದು ಜಾಗಕ್ಕೆ ಕರೆದುಕೊಂಡು ಹೋದ. ನಂತರ ಅವರೆಲ್ಲರೂ ಅಲ್ಲಿ ಕಣ್ಮರೆಯಾಗಿ ಬಿಟ್ಟರು. ಹಿಂದೆ ಓಡಿದ ಹಳ್ಳಿಯ ಜನ, ಮಕ್ಕಳೆಲ್ಲರನ್ನೂ ಕಳೆದುಕೊಂಡು ದಿಗ್ಬ್ರಾಂತರಾದರು. ತಮ್ಮ ಜಿಪುಣತನಕ್ಕೆ, ತಾವು ಮಾಡಿದ ಮೋಸಕ್ಕೆ ತಕ್ಕ ಬೆಲೆಯನ್ನು ತೆತ್ತರು. ಜೋಗಿಯ ಹಿಂದೆ ಹೋದ ಮಕ್ಕಳು ಕಿನ್ನರಲೋಕಕ್ಕೆ ಹೋಗಿ ಅಲ್ಲಿ ಸಂತೋಷದಿಂದಿದ್ದರು.
ಒಟ್ಟಿನಲ್ಲಿ ಈ ಕಥೆಯಿಂದ ಕಲಿಯುವ ನೀತಿ, ಪರಿಸರ ಸಮತೋಲನವನ್ನು ಕಾಯ್ದುಕೊಳ್ಳಬೇಕು, ಕೊಟ್ಟ ಭಾಷೆಗೆ ತಪ್ಪಬಾರದು ಎಂದು. ಇದನ್ನು ಪದ್ಯದ ರೂಪದಲ್ಲಿ ಬರೆದು ರಾಗ ಸಂಯೋಜಿಸಿ ನುಡಿಸಿದ್ದೇನೆ. ಓದಿ, ಕೇಳಿ ಇತರರೊಂದಿಗೂ ಹಂಚಿಕೊಂಡು ಉತ್ತೇಜಿಸಿ.
ಮೋಸದ ಹಳ್ಳಿಯ ಜನರು ಮಾಡಿದ ತಿಳಿಗೇಡಿ ಕೆಲಸವ ಕೇಳಿ ತಿಳಿದರೆ (gili gili gilakku)
ನೀತಿಯ ಪಾಠವ ಕಲಿಯುವಿರಿ, ಜೀವನ ಪಾಠವ ಅರಿಯುವಿರಿ //
ಕಾಟ ಕೊಟ್ಟಿತು ಬೆಕ್ಕುಎಂದು ಗಿಡದ ಬಳಿಯ ಹಾವು ಕಂಡು
ಹೆದರಿ ಬೆದರಿ ಬೆಚ್ಚಿಬಿದ್ದು ಹಾವುಗಳನ್ನು ಚಚ್ಚಿದರು; ಬೆಕ್ಕುಗಳೆಲ್ಲವ ಕೊಚ್ಚಿದರು //
********** ************ ***********
ಇಲಿಗಳ ಸಂತತಿ ವೃದ್ಧಿಯಾಗಿ ಇಲಿಯೋ ಇಲಿಗಳು ಎಲ್ಲೆಲ್ಲೂ
ಹಳ್ಳಿ ಜನಕೆ ಪಿಡುಗ ತಂದು ಇಲಿಗಳು ಮಾರಕವಾಯಿತು; ಪ್ಲೇಗಿನ ಮಾರಿಯು ನರ್ತಿಸಿತು //
ಇಲಿಗಳ ಕೊಂದರೆ ನಿಧಿಯನು ಕೊಡುವೆವು ಎನ್ನುತ ಎಲ್ಲೆಡೆ ಸಾರಿದರು
ಇಲಿಗಳ ಕಾಟಕೆ ಮುಕ್ತಿಯು ಸಿಗಲಿ ಎನ್ನುತ ದೇವರ ಕೇಳಿದರು ಪರಿಪರಿಯಾಗಿ ಬೇಡಿದರು //
********** ************ ***********
ದೇವರು ಕಳಿಸಿದ ದೂತನಂತೆ, ಕಿಂದರಿ ಹಿಡಿದ ಜೋಗಿಯೊಬ್ಬ (aluvudyatako ranga)
ಇಲಿಗಳೆಲ್ಲವ ಕೊಂದುಬಿಡುವೆ ನೀಡಿರಿ ನಿಧಿಯನು ನನಗೆಂದು ಹಳ್ಳಿಯ ಜನಗಳ ಕೇಳಿದ //
ಮೊದಲು ಇಲಿಗಳ ನಾಶ ಮಾಡು ಆ ಮೇಲೆ ಬಂದು ನಿಧಿಯನು ಕೇಳು
ಎಂದರು ಹಳ್ಳಿಯ ಜನಗಳು ಒಪ್ಪಿಗೆ ಇತ್ತಾ ಆ ಜೋಗಿ ಕಿಂದರಿ ವಾದ್ಯವ ನುಡಿಸಿದನು//
********** ************ ***********
ಜೋಗಿಯು ನುಡಿಸಿದ ಕಿಂದರಿ ಕೇಳಿ ಎಲ್ಲ ಇಲಿಗಳು ಮೋಡಿ ಆಗಿ (nammure anda)
ಓಡಿಓಡಿ ಜೋಗಿಯ ಹಿಂದೆ ಜೋಗಿಯ ಆಜ್ಞೆಗೆ ಕಾದವು ಚಾಚೂ ತಪ್ಪದೆ ಪಾಲಿಸಿದವು //
ಜೋಗಿಯು ಆಗ ಮುಂದೆ ಸಾಗಿ, ಇಲಿಗಳ ಹಿಂಡು ವಿಧೇಯರಾಗಿ
ಅಡ್ಡ ಸಿಕ್ಕ ನದಿಯನು ಮರೆತು ಒಂದೊಂದಾಗಿ ಧುಮುಕಿದವು ನೀರಲಿ ಪ್ರಾಣವ ನೀಗಿದವು //
********** ************ ***********
ಜೋಗಿ ಹಳ್ಳಿಗೆ ಮರಳಿ ಬಂದು ನಿಧಿಯ ಕೊಡಿರಿ ಎಂದು ಕೇಳಲು
ಸುಮ್ಮನೆ ಕಿಂದರಿ ಊದಿದೆ ಸ್ವಲ್ಪವೂ ಕಷ್ಟವ ಪಡಲಿಲ್ಲ ಸುಮ್ಮನೆ ಮುಂದಕೆ ಹೋಗೆಂದರು/
ಮೋಸಮಾಡಿದ ನಿಮಗೆ ನಾನು ಬುದ್ಧಿ ಕಲಿಸುವೆ ಎಂದು ಹೇಳಿ
ಕಿಂದರಿ ವಾದ್ಯವ ಹೊರ ತೆಗೆದ ಸುಂದರ ನಾದವ ಮೂಡಿಸಿದ ಉನ್ಮಾದದ ರಾಗವ ಹೊರಡಿಸಿದ /
********** ************ ***********
ಜೋಗಿಯು ನುಡಿಸಿದ ಕಿಂದರಿ ಕೇಳಿ ಹಳ್ಳಿಯ ಮಕ್ಕಳು ಮೋಡಿ ಆಗಿ (chand ki raat)
ಓಡಿಓಡಿ ಜೋಗಿಯ ಹಿಂದೆ ಕಿಂದರಿ ನಾದಕೆ ಹಾಡಿದವು ಕುಣಿಯುತ ನಲಿಯುತ ಸಾಗಿದವು //
ಯಾರೇ ತಡೆದರು ಕೇಳದ ಮಕ್ಕಳು ಸಡಗರದಿಂದ ಬೆಟ್ಟವ ಹತ್ತಿ
ಜೋಗಿಯ ಹಿಂದೆ ಓಡುತ ಓಡುತ ಕಿನ್ನರ ಲೋಕವ ಸೇರಿದವು ಸಂತಸದಿಂ ನಲಿದಾಡಿದವು //
********** ************ ***********
ಮೋಸದ ಹಳ್ಳಿಯ ಈ ಕಥೆಯಿಂದ ಪರಿಸರ ನೀತಿಯ ಪಾಠವ ಕಲಿತು
ಕೊಟ್ಟ ಭಾಷೆಗೆ ತಪ್ಪದಿರೆಂದು ನೀತಿಯ ಪಾಠವ ಕಲಿತಿಹೆವು ಜೀವನ ಪಾಠವ ಕಲಿತಿಹೆವು //
ಕವನ - ನಿಸರ್ಗವೇ ಸ್ವರ್ಗ - ರಚನೆ - ಜಗದೀಶ ಚಂದ್ರ
(ರಾಗ - ಕ್ವಾಬ್ ಹೊ ತುಮ್ ಎಂಬ ಹಿಂದಿ ಚಿತ್ರ ಗೀತೆಯಿಂದ ಪ್ರೇರಿತ)
ನಿಸರ್ಗವೇ ಸ್ವರ್ಗ (Nature is Heaven / Lyrics - Jagadeesha Chandra) / ರಚನೆ - ಜಗದೀಶ ಚಂದ್ರ
ಮಕ್ಕಳಂತೆ ಅಡಿ ಕುಣಿದು ಸ್ವರ್ಗ ಸವಿಯುವ ಬನ್ನಿ
ಹಕ್ಕಿಯಂತೆ ಮೇಲೆ ಹಾರಿ ನಿಸರ್ಗ ಸವಿಯುವ ಬನ್ನಿ //
ಜುಳುಜುಳನೆ ಹರಿಯುತಿಹಾ ನದಿಯಲ್ಲಿ ಈಜಾಡಿ
ಅಲೆಅಲೆಯು ಮೂಡುತಿರೆ ಚೆಲ್ಲಾಟಾ ಆಡುತಿರೆ
ಪುಳಕದಲಿ ಓಲಾಡಿ ಮನದಲ್ಲೇ ನಲಿದಾಡಿ
ಮೀನಂತೇ ಹರಿದಾಡಿ ತನುಮನಕೆ ಸವಿ ನೀಡಿ //
ದೂರದಲಿ ಹಸಿರಾಗಿ ಕಾಣುತಿಹ ಗಿರಿ ನೋಡಿ
ಗಿರಿಯಲ್ಲಿ ಮೂಡಿರುವಾ ಬನಸಿರಿಯಾ ಕಣ್ತುಂಬಿ
ಅದರೊಳಗೆ ಓಡಾಡಿ ಹತ್ತಿಳಿದು ಒದ್ದಾಡಿ
ಸೊಬಗನ್ನು ಸೆರೆ ಹಿಡಿದು ಮನಕ್ಕಿಷ್ಟು ಮುದನೀಡಿ //
ಕಾಯೆ ನಿನ್ನ ಪದ ತೋಯಜ ಕೆರಗುವೆ |
ಮಾಯದೇವಿ ಹರಿ ಕಾಯ ನಿವಾಸೇ ||ಪ || |ಕಾಯೇ|
ಬುದ್ಧಿಯ ಪ್ರೇರಿಸೆ | ಪ್ರದ್ಯುಮ್ನನ ಸತಿ ||
ಕರ್ದಮಜಾಲಯ | ಭದ್ರ ಶರೀರೆ ||
ಇಂಗಡಲಾತ್ಮಜೆ | ಅಂಗನಾಕುಲ ಮಣಿ ||1||
ರಂಗನ ಪದಕಂಜ | ಭೃಂಗೆ ಕರುಣದಿ ||
ಪ್ರಾಣೇಶ ವಿಠಲನ | ಮಾನಿನೀ ಎನ್ನಯ ||
ಹೀನತೆಯೆಣಿಸದೆ | ಪೋಣಿಸಿ ಮತಿಯ ||2||
ಹೋಳಿ ಹಬ್ಬದಾ ಸಂಭ್ರಮಕಿಂದು
ಪೂರ್ಣ ಚಂದ್ರನೇ ಅಗಿಹ ಜ್ಯೋತಿ
ಕಾಮ ಕ್ರೋಧ ಮದ ಲೋಭ ಮೋಹ ವೆಂಬ
ಕೆಟ್ಟ ಶಕ್ತಿಗಳ ಆಹುತಿ ನೀಡಿ
ದುಷ್ಟ ದಮನದ ವಿಜಯ ಸಂಕೇತದ //
ಬಡವ ಬಲ್ಲಿದ ಜಾತಿ ಧರ್ಮಗಳ
ಬೇಧವನ್ನೆಲ್ಲ ದೂರಕೆ ಇಟ್ಟು
ನಕ್ಕು ನಲಿಯುತಾ ಬಣ್ಣ ಎರಚುವಾ //
Poem - Yugadi, Vasanta / Lyrics - Jagadeesha Chandra
ಕವನ - ಯುಗಾದಿ ವಸಂತ ರಚನೆ - ಜಗದೀಶ ಚಂದ್ರ
Tune inspired by a Hindi Bhajan / ರಾಗ - ಹಿಂದಿ ಭಜನೆಯೊಂದರಿಂದ ಪ್ರೇರಿತ
ಬಂತುsss ಯುಗಾದಿss ಬಂತುsss ವಸಂತ ss
ಈ ಪ್ರಕೃತಿ ವೈಭವ ಹರುಷ ಸಂಭ್ರಮ ನವ ವಿಲಾಸವ ತಂದಿದೆ
ಈ ಯುಗಾದಿಯ ಬರಮಾಡಲು ಈ ನವ ವಸಂತವು ಕಾದಿದೆ
ಹೊಸ ವರುಷಕೇ ಶುಭ ಕೋರಲು ಸಕಲ ಸಿದ್ಧತೆ ಯಾಗಿದೆ
ಆ ಬಣ್ಣ ಬಣ್ಣದ ಚಿಗುರು ಹೂವುಗಳು ಮನವ ತಣಿಸಲು ಕಾದಿದೆ
ಹೊಸವರ್ಷಕೆಂದೆ ವಸಂತ ಬರೆದ ಭವ್ಯ ಚಿತ್ರವು ಮಿಂಚಿದೆ
ವೈಶಾಖ ಚೈತ್ರ ವು ಒಂದುಗೂಡಲು ಪ್ರಕೃತಿ ಹರುಷದಿ ನಲಿದಿದೆ
ಆ ಹೂವ್ಗೆ ದುಂಬಿಯು ಮುತ್ತ ನೀಡಲು ಚಿಗುರು ಕುಣಿದೋಲಾಡಿದೆ
ಹೂ ಚಿಗುರೆಲೆ ತರುಲತೆಗಳೂ ಹೊಸ ವರ್ಣ ಕಂಪನು ಬೀರಿದೆ
ನವಯುಗಾದಿಗೆ
ಪ್ರಕೃತಿ ಪುರುಷ
ಈ ಪ್ರಕೃತಿ ಪುರುಷರ ಮಿಲನ ಸಂಭ್ರಮ ನವ ವಿಲಾಸವ ತಂದಿದೆ
ಯುಗ ದಾದಿಯ ಬರಮಾಡಲು ಈ ನವ ವಸಂತವು ಕಾದಿದೆ
ನವಸಂತ ಋತುವಿಗೆ ಶುಭವ ಕೋರಲು ಎಲ್ಲ ಸಿದ್ಧತೆ ಯಾಗಿದೆ
ಹೂ ಚಿಗುರೆಲೆ ತರುಲತೆಗಳೂ ಕಂಪು ಬಣ್ಣವ ಬೀರಿದೆ
ವೈಶಾಖ ಚೈತ್ರ ವು ಒಂದುಗೂಡಲು ಪ್ರಕೃತಿ ಹರುಷದಿ ನಲಿದಿದೆ
ಆ ಹೂವ್ಗೆ ದುಂಬಿಯು ಮುತ್ತ ನೀಡಲು ಚಿಗುರು ನರ್ತನಗೈದಿದೆ
ಆ ಬಣ್ಣ ಬಣ್ಣದ ಚಿಗುರು ಹೂವುಗಳು ಕವಿಯ ಕಣ್ಮನ ತಣಿಸಿವೆ
ಹೊಸವರ್ಷಕೆಂದೇ ವಸಂತ ಬರೆದ ಚಿತ್ರವೂ ಮನ ಸೆಳೆದಿದೆ
ನವಯುಗಾದಿಗೆ
ಶ್ರೀರಾಮಚಂದ್ರ ಕೃಪಾಲು ಭಜ ಮನ ಹರಣ ಭವಭಯ ದಾರುಣಂ
ನವಕಂಜಲೋಚನ ಕಂಜಮುಖ ಕರಕಂಜ ಪದಕಂಜಾರುಣಂ ||
ಕಂದರ್ಪ ಅಗಣಿತ ಅಮಿತ ಛವಿ ನವ ನೀಲ ನೀರಜ ಸುಂದರಂ
ಪಟ ಪೀತ ಮಾನಹು ತಡಿತ ರುಚಿ-ಶುಚಿ ನೌಮಿ ಜನಕ ಸುತಾವರಂ ||
ಭಜ ದೀನಬಂಧು ದಿನೇಶ ದಾನವ ದೈತ್ಯ ವಂಶ ನಿಕಂದನಂ
ರಘುನಂದ ಆನಂದ ಕಂದ ಕೋಸಲಚಂದ ದಶರಥ ನಂದನಂ ||
ಶಿರ ಮುಕುಟ ಕುಂಡಲ ತಿಲಕ ಚಾರು ಉದಾರ ಅಂಗ ವಿಭೂಷಣಂ
ಆಜಾನುಭುಜ ಶರ ಚಾಪಧರ ಸಂಗ್ರಾಮಜಿತ ಖರ ದೂಷಣಂ ||
ಇತಿ ವದತಿ ತುಲಸೀದಾಸ ಶಂಕರ ಶೇಷ ಮುನಿ ಮನ ರಂಜನಂ
ಮಮ ಹ್ರದಯ ಕಂಜ ನಿವಾಸ ಕುರು ಕಾಮಾದಿ ಖಲ-ದಲ-ಗಂಜನಂ ||
ಶ್ರೀ ಎಚ್ ಕೆ ನಾರಾಯಣ ಅವರು ಸಂಗೀತ ನೀಡಿರುವ ಕೆ ಎಸ್ ನ ಅವರ ದೇವ ನಿನ್ನ ಮಾಯೆಗಂಜಿ ಎಂಬ ಭಾವಗೀತೆ
ನಿನ್ನ ಬಾಂದಳದಂತೆ ನನ್ನ ಮನವಿರಲಿ
ನಿನ್ನ ಸಾಗರದಂತೆ ನನ್ನ ಎದೆಯಿರಲಿ /
ನಿನ್ನ ಸುಗ್ಗಿಯ ತೆರದಿ ನನ್ನ ಸೊಬಗಿರಲಿ
ನಿನ್ನ ಲೀಲೆಯ ತೆರದಿ ನನ್ನ ಬಾಳಿರಲಿ
ನಿನ್ನ ಬಲವಿರುವಂತೆ ನನ್ನ ಬಲವಿರಲಿ
ನಿನ್ನ ತಿಳಿವಿರುವಂತೆ ನನ್ನ ತಿಳಿವಿರಲಿ /
ನಿನ್ನೊಲ್ಮೆಯಂದದಲಿ ನನ್ನೊಲ್ಮೆಯಿಲಿ
ನಿನ್ನಾಳವೆನಗಿರಲಿ ನೀನೇ ನನಗಿರಲಿ
ನಿನ್ನಾತ್ಮದಾನಂದ ನನ್ನದಾಗಿರಲಿ
ನಿನ್ನೊಳಿರುವ ಶಾಂತಿ ನನ್ನೆದೆಗೆ ಬರಲಿ /
ಸಾಹಿತ್ಯ: ಕುವೆಂಪು
ಬಾಳಿನಲಿ ನಮಗಾರು ಶತ್ರುಗಳು ಇಹುದು
ಅದನು ಮೆಟ್ಟಿಸಿ ನಿಲ್ಲು ಆಗ ಸುಖ ನಿನದು //
ಕಂಡ ಕಂಡದು ಬಯಸೆ ಕಾಮವಾಗುವುದು
ಅದು ಕೈಗೆ ಸಿಗದಾಗ ಕ್ರೋಧ ವಾಗುವುದು
ಇನ್ನಷ್ಟು ಬೇಕೆನಲು ಲೋಭ ಮೂಡುವುದು
ಇದ್ದುದನು ಮುಚ್ಚಿಡಲು ಮೋಹ ವಾಗುವುದು //
ಹಿಡಿದಿಟ್ಟ ಬಯಕೆಗಳು ಜಂಬ ಬರಿಸುವುದು
ಆ ಜಂಬದಿಂದಲೇ ಮದವೇರಿ ಬಹುದು
ತನ್ನ ಬಳಿ ಇಲ್ಲದುದ ಅವನ ಬಳಿ ಕಂಡಾಗ
ಮತ್ಸರವು ಬಳಿ ಬಂದು ಮನವ ಕಾಡುವುದು //
ಇರಬೇಕು ಬಯಕೆಗಳು ನೂರೆಂಟು
ಅದಕೂ ಭಾವಕು ಬಹು ಅಂಟು
ಹೌದು, ಅದು ಜೀವದ ಗಂಟು
ಬಯಕೆಗಿರಲಿ ಸದ್ವಿಚಾರ ನಂಟು
ಆಗ ಅದಕೆ ಸಫಲತೆ ಉಂಟು //
ಬಹುದಿನದ ಬಯಕೆ ಹಾಗೆ ಉಳಿದು
ಹೆಪ್ಪುಗಟ್ಟಿ ಹುಳಿಯಾಗುವ ಮುನ್ನ
ಹಾಲು ಬೆಳದಿಂಗಳಾಗಿ ಆನಂದದ ಹೊಳೆಯಾಗಿ
ಸಂತೃಪ್ತಿಯ ನದಿಯಾಗಿ ಹರಿದು ಸೇರಲಿ
ಸಂತೃಪ್ತಿಯ ಶರಧಿಯಲಿ.
ಮೇಘನಾ ಜಹಗೀರದಾರ
ಧಾರವಾಡ
ಸಿಕ್ಕಿದ್ದನ್ನೆಲ್ಲಾ ಮಾಡುವೆ ಎಂದರೆ ಬಾಳು ಉತ್ತಮವಾಗುವುದಿಲ್ಲ
ಕೇವಲ ಒಂದನ್ನು ಮನಸಿಟ್ಟು ಚೆನ್ನಾಗಿ ಮಾಡಿದರೆ ಹಸನಾದ ಬಾಳು ನಿಮ್ಮದೇ
ನಿಮ್ಮ ಬಾಳೆಂಬ ಚಿತ್ರಕ್ಕೆ ನಟರೂ ನೀವೇ , ನಿರ್ದೇಶಕರೂ ನೀವೇ
ಸುಲಭವೆಂದು ಅನಿಸುವ ಮರುಕ್ಷಣ ಕ್ಲಿಷ್ಟವೆನಿಸುವ
ಅಂತ್ಯ ಹೇಗೋ , ಮುಂದೆ ಹೇಗೋ ?????
ಇದುವೇ ನಿಮ್ಮ ನಮ್ಮ ಜೀವನ ಚಿತ್ರ
ಸಿಕ್ಕಿದ್ದನ್ನು ಪಡೆದು ಸುಖ ಪಡು
ಸಿಗದದ್ದನ್ನು ಮರೆತು ಖುಷಿಯಾಗಿರು
ನಿನ್ನೆ ನಿನ್ನೆಗೆ ಇಂದು ಇಂದಿಗೆ ಎಂದು ಬದುಕು
ನಾಳೆಯ ಚಿಂತೆ ಬೇಡ , ಅದೇ ಮುಂದೆ ಇಂದು, ನಿನ್ನೆಯಾಗುವುದು
ರಾಮಕೃಷ್ಣ ಭಕ್ತಿಗೀತೆ / ರಚನೆ, ಕೀಬೋರ್ಡ್ - ಜಗದೀಶ ಚಂದ್ರ
Ramakrishna Devotional song / Lyrics, Keyboard - Jagadeesha Chandra / ರಚನೆ, ಕೀಬೋರ್ಡ್ - ಜಗದೀಶ ಚಂದ್ರ
ಕೃಪೆ ತೋರಿಸಿ ಗುರುಗಳೇ ಕರುಣಿಸಿ
ಶ್ರೀ ರಾಮಕೃಷ್ಣ ಗುರುವೇ ದಯಾಳು //
ಹಾಡುಗಳ ಹಾರವನು ತಂದಿಹೆನು ನಿಮಗೆ
ಆರತಿಗೆ ತಂದಿಹೆನು ನನ್ನೊಡಲ ಜ್ಯೋತಿ //
ಅಅಅ ಅಅಆ ಅಅಆ sssss ಆ ಆ ಆ
ಉಸಿರಿಂದ ಮಂತ್ರವನು ಅರ್ಪಿಸುವೆನು ನಿಮಗೆ
ಇನ್ನೇನು ಕೊಡಲಿ ನಾನೊಬ್ಬ ದೀನ //
ಶಾರದೆ ರಮಣ ಕಾಳಿಯ ಭಕ್ತ ನಮಿಸುವೆನು ನಿನಗೆ
ಎಲ್ಲ ಭಕ್ತರ ಸಮದಿ ಕಾಣೋ ರಾಮಕೃಷ್ಣ ಗುರುವೇ
ಉದ್ಧರಿಸಿ ಹರಸಿsss ಉಳಿಸಿ ಬನ್ನಿsss ಶ್ರೀsss ರಾsssಮಕೃಷ್ಣ ಗುರುವೇ //
ಕಣ್ಮರೆಯಾದ ಗುಬ್ಬಿ
ಎಲ್ಲಿಗೆ ಹೋದೆಯೆ ಗುಬ್ಬಚ್ಚಿ
ಹಕ್ಕಿಯ ಜಾತಿಯ ಪಾಪಚ್ಚಿ
ಸಂಗವ ಬಿಡಬೇಡ ಗುಬ್ಬಚ್ಚಿ
ವಾಪಸ್ಸು ಬಾ ಬಾ ಗುಬ್ಬಚ್ಚಿ //
ಕಿಚಿಕಿಚಿ ಎನ್ನುತ ಹಾರಿಬಂದು
ಹುಲ್ಲಿನ ಕಡ್ಡಿಯ ಕಿತ್ತು ತಂದು
ಅಟ್ಟದಿ ಕಟ್ಟಿದೆ ಗೂಡೊಂದು
ಆಯಿತು ನಿನಗೆ ಮನೆಯೊಂದು // ೧
ಅಡಿಗೆಯ ಮನೆಯಲಿ ಅನ್ನವ ಕದ್ದು
ಮರಿಯನು ಗೂಡೊಳು ಬೆಳೆಸುತಲಿದ್ದು
ಬರೆಯಲು ಕುಳಿತರೆ ಮರಿಗಳ ಸದ್ದು
ಓದಲು ಕುಳಿತರೆ ಸದ್ದೋ ಸದ್ದು // ೨
ಪೂಜೆಗೆ ಕುಳಿತರೆ ಪಟಪಟ ರೆಕ್ಕೆ
ಮರಿಗಳ ಹಾರುವ ಆಟದ ಕಲಿಕೆ
ಹೊಡೆಯುತ ಡಿಕ್ಕಿ ದೇವರ ಪಟಕೆ
ಬೇಗನೆ ಹಾರಿ ಹೋಗುವ ಬಯಕೆ // ೩
ಸಂಜೆಯು ಆದರೆ ಮನೆಯೊಳಗೋಡಿ
ಮಾಡಿನ ಗೂಟದಿ ಬೆಚ್ಚಗೆ ಕೂಡಿ
ತಲೆಯನು ಹುದುಗಿಸಿ ನಿದ್ದೆಯ ಮಾಡಿ
ಹಾಕಿದೆ ಪಿಚಿಕೆಯ ನೆಲಕೊಳೆ ಮಾಡಿ // ೪
ಬಂದಿತು ಹೊಸ ಹೊಸ ಜರಡಿಯ ಕಿಟಕಿ
ಒಳಬರಲಾಗದು ಜರಡಿಯ ಕುಟುಕಿ
ಹೊರಗಡೆ ಕಾದಿದೆ ಕಾಗೆಯು ತಾಟಕಿ
ಜೀವನ್ಮರಣದಿ ಬಳಲಿದೆ ಬದುಕಿ // ೫
ನೋಡುತ ನಲಿಯುತ ನಿನ್ನಯ ಆಟ
ಸಿಕ್ಕುತಲಿತ್ತು ಸವಿರಸದೂಟ
ಏನೇ ಆದರು ನಿನ್ನಯ ಕಾಟ
ಬೇಕೇ ಬೇಕು ನಿನ್ನೊಡನಾಟ // ೬
ಎಲ್ಲಿಗೆ ಹೋದೆಯೆ ಪುಟ್ಟ ಗುಬ್ಬಿ
ಚಿಲಿಪಿಲಿ ಹಾಡುವ ಮರಿಗುಬ್ಬಿ
ನಮ್ಮೊಡನಿರಲು ಬಾ ಗುಬ್ಬಿ
ಮಾಡಿದೆ ಪಾಪ ನಿನ್ಹೊರ ದಬ್ಬಿ //
ಕರ್ನಾಟಕದ ಸ್ವಾತಂತ್ರ್ಯ ವೀರರು
ಲಾಲಾ ಲಜಪತ್ ರಾಯ್
ಗೋವಿಂದ ವಲ್ಲಭ ಪಂತ್
ಬಾಲ ಗಂಗಾಧರ ತಿಲಕ್
ಝಾನ್ಸಿ ರಾಣಿ ಲಕ್ಷ್ಮಿ ಬಾಯಿ
ಮೋಹನ್ ದಾಸ್ ಕರಮ್ ಚಂದ್ ಗಾಂಧಿ
ಗೋಪಾಲ ಕೃಷ್ಣ ಗೋಖಲೆ
ಮೋತಿ ಲಾಲ್ ನೆಹರು
ಭೀಮ್ ರಾವ್ ಅಂಬೇಡ್ಕರ್
ವಿಜಯ ಲಕ್ಷ್ಮಿ ಪಂಡಿತ್
ಬಿಪಿನ್ ಚಂದ್ರ ಪಾಲ್
ಸುಭಾಷ್ ಚಂದ್ರ ಬೋಸ್
ರವೀಂದ್ರ ನಾಥ್ ಟ್ಯಾಗೋರ್
ಕಸ್ತೂರ್ ಬಾ ಗಾಂಧಿ
ಚಂದ್ರ ಶೇಖರ್ ಅಜಾದ್
ವೀರ ವನಿತೆ ಓಬವ್ವ
ಜವಾಹರ ಲಾಲ್ ನೆಹರು
+5 R089 spd120 T280L291 Split T089L147 BGVol080
ಕೈಗಳೇ ದೇವರು
ಕೈಗಳ ಕೊನೆಯಲ್ಲಿ ಭಾಗ್ಯದೇವತೆಯು ಕರಗಳ ಕೊನೆಯಲಿರುವಳು ಲಕ್ಷ್ಮಿ
ಕೈಗಳ ಮಧ್ಯದಲ್ಲಿ ವಿದ್ಯಾದೇವತೆಯು ಕರಗಳ ಮಧ್ಯದಲಿರುವಳು ವಾಣಿ
ಕೈಗಳ ಮೂಲದಲ್ಲಿ ಶಕ್ತಿದೇವತೆಯು ಕರಗಳ ಮೂಲದಲಿರುವಳು ದುರ್ಗೆ
ಕೈಗಳ ದರ್ಶನವೇ ದೇವರ ದರ್ಶನವು ಕರಗಳ ದರ್ಶನವೇ ದೇವರ ದರ್ಶನವೂ
ಕೈಗಳ ಮುಗಿಯುತ್ತ ದೇವರ ನೆನೆಯೋಣ ಕರಗಳ ಮುಗಿಯುತ್ತ ಹಿರಿಯರ ನೆನೆಯೋಣ
ಗುರುಹಿರಿಯಗೆ ನಮಿಸಿ ಹರಸಿರಿ ಎನ್ನೋಣ ಗುರುವಿಗೆ ನಮಿಸಿ ಹರಸೆಂದು ಬೇಡೋಣಾ
ಹರಸಿರಿ ಎನ್ನೋಣ // ಕರದಿಂದುತ್ತಮ ಕೆಲಸವ ಮಾಡಿ
ಕೈಗಳ ಮುಗಿಯುತ್ತ ಪರಸ್ಪರ ಗೌರವಿಸೋಣ ಜಗದೊಡೆಯಗೆ ಧನ್ಯತೆ ತೋರೋಣ
ಪ್ರತ್ಯಕ್ಷ ದೇವನಾದ ಸೂರ್ಯಗೆ ನಮಿಸೋಣ
ಶ್ರೇಷ್ಠ ಕೈಗಳಿಂದ ಉತ್ತಮ ಕೆಲಸವ ಮಾಡೋಣ
ಬಾಳನು ಸಾರ್ಥಕ ಗಳಿಸೋಣ
ಜಗದೊಡೆಯನ ನೆನೆಯೋಣ //
- ಜಗದೀಶ ಚಂದ್ರ ಬಿ ಎಸ್ -
ವಿವೇಕ ವಾಣಿಯ ಕವನ
ಏಳಿ ಎದ್ದೇಳಿ ಗುರಿಯನು ಸಾಧಿಸಿರಿ
ಸಾಧಿಸೊ ತನಕ ಸುಮ್ಮನೆ ಕೂಡದಿರಿ
ನಮ್ಮ ದುಃಖಕೆ ನಾವೇ ಕಾರಣ
ಎಂಬುದನೆಂದೂ ಮರೆಯದಿರಿ //
ಸಾಧ್ಯವೆ ಇಲ್ಲ ಎಂಬ ಮಾತನು
ಕಾಣದ ಜಾಗಕೆ ಒಗೆದು ಬಿಡಿ
ಗೆದ್ದರೆ ಸುಖವು ಸೋತರೆ ಅನುಭವ
ಎಂಬುದನೆಂದೂ ಮರೆಯದಿರಿ //
ಕಾಲವು ಕೆಟ್ಟಿದೆ ಎಂಬ ಮಾತು
ಕೇವಲ ಹೇಳಿಕೆಯಾಗಿದೆಯಷ್ಟೇ
ಕೆಡುವುದು ಆಚಾರ ವಿಚಾರವಷ್ಟೇ
ಎಂಬುದನೆಂದೂ ಮರೆಯದಿರಿ //
ಜೀವವೆಂಬುದು ನಮ್ಮ ಮಾತನು
ಕೇಳದೆ ಸುಮನೆ ಇರಬಹುದು
ನಿಮ್ಮಮೂಲ್ಯ ಜೀವನವನ್ನು
ಇಷ್ಟದಿ ರೂಪಿಸಿಕೊಳಬಹುದು //
ಜೀವನದಲ್ಲಿ ಸಾಧನೆ ಇರಬೇಕು
ಅದಿಲ್ಲದೆ ಸತ್ತರೆ ಸಾವಿಗೆ ಅವಮಾನ
ಆದರ್ಶವೆಂಬುದು ಬದುಕಿಗೆ ಸೋಪಾನ
ಇಲ್ಲದೆ ಇದ್ದರೆ ಬದುಕಿಗೆ ಅವಮಾನ //
ವಿವೇಕವಾಣಿ ಮನನವ ಮಾಡಿ
ಜೀವನ ಪಾವನ ಗೊಳಿಸಿಬಿಡಿ //
- ಜಗದೀಶ ಚಂದ್ರ ಬಿ ಎಸ್ -
ಏ ಪ್ರೀತ್ ಸದಾಕೆ ರೀತ್ ಸದಾ ಹಾಡಿಗೆ ಹೊಂದುವಂತೆ ಪ್ರಯತ್ನ
ಏಳಿ ಏಳಿರಿ ಗುರಿ ಸಾಧಿಸಿರಿ
ಮತ್ತೆ ಮತ್ತೆ ಮಾಡಿ ಸಾಧಿಸಿರಿ
ಗುರಿ ಇದ್ದಾ ಬಾಳು ಚಂದಾ
ಎಂಬ ನೀತಿಯ, ಬುದ್ದಿ ಮಾತನು
ಎಂದಿಗೂ ಮರೆಯದಿರಿ ಮರೆಯದಿರಿ
ಈ ಬುದ್ಧಿಯ ಮಾತನು ಮರೆಯದಿರಿ
ಈ ನೀತಿಯ ವಾಕ್ಯವ ಮರೆಯದಿರಿ //
ಸಾಧ್ಯವೆ ಇಲ್ಲ ಎಂಬ ಮಾತನು
ಕಾಣದ ಜಾಗಕೆ ಒಗೆದು ಬಿಸಾಕಿ ಮರೆತು ಬಿಡಿ
ಗೆದ್ದರೆ ಸುಖವು ಸೋತರೆ ಅನುಭವ
ಎಂಬುದನೆಂದೂ ಮರೆತು ಹೋಗದಿರಿ
ಇಂಥ ನೀತಿಯನು, ಬುದ್ದಿ ಮಾತನ್ನು ನೀವು ಎಂದಿಗೂ
ನೀವು ಎಂದಿಗೂ ಮರೆತು ಹೋಗದಿರಿ
ಈ ಬುದ್ಧಿಯ ಮಾತನು ಮರೆಯದಿರಿ
ಈ ನೀತಿಯ ವಾಕ್ಯವ ಮರೆಯದಿರಿ //
ನಿಮ್ಮಯ ಜೀವನ ಅತಿ ಅಮೂಲ್ಯ
ಅದನ್ನು ನೀವೇ ರೂಪಿಸ ಬೇಕು
ಜೀವನ ಪಥದಿ ಸಾಧನೆ ಇರಬೇಕು
ಸಾಧನೆ ಇಲ್ಲದೆ ಸತ್ತರೆ ಅವಮಾನ
ಇಂಥ ನೀತಿಯ, ಬುದ್ದಿ ಮಾತನು ನೀವು ಎಂದಿಗೂ
ನೀವು ಎಂದಿಗೂ ಮರೆತು ಹೋಗದಿರಿ
ಈ ಬುದ್ಧಿಯ ಮಾತನು ಮರೆಯದಿರಿ
ಜಗದೊಡೆಯನ ನೆನೆಯಲು ಮರೆಯದಿರಿ //
ವಿವೇಕವಾಣಿ ಮನನವ ಮಾಡಿ
ಜೀವನ ಪಾವನ ಗೊಳಿಸಿಬಿಡಿ //
ಧರ್ಮ (ಮನು ಧರ್ಮದಿಂದ ) +5 T280L291/T088L149/R075/Spd60 in voice recorder
ಎಲ್ಲರಿಗೂ ನಮಸ್ಕಾರ
ಇಂದಿನ ಸಾಹಿತ್ಯ ಚಾವಡಿಗೆ ಒಂದು ಕವನ
ಜೀವನ - - ಬಿ ಎಸ್ ಜಗದೀಶ ಚಂದ್ರ -
ಪರರ ಇಚ್ಚೆಯಂತೆ ಬಾಳೋ ದೇತಕೆ
ಇದುವೇ ದುಃಖ ಚಿಂತೆಗೆ ಮೂಲವಾಗಿದೆ
ನಮ್ಮ ಇಷ್ಟದ ಬದುಕಿಗೆ ಕಷ್ಟಗಳು ಇರುವುವು
ಈಗ ಕಷ್ಟ ಪಟ್ಟರೆ ಸುಖಗಳು ದೊರೆವುದು //
ನಮ್ಮ ಒಳಿತಿಗಾಗಿ ತಮ್ಮ ಬಾಳ ತೇಯ್ದರು
ಅವರೆ ನಮ್ಮ ತಂದೆ ತಾಯಿ ಗುರುದೇವರು
ಅವರಿಗೆಂದು ದ್ರೋಹವನ್ನು ಮಾಡಬಾರದು
ಅವರ ಒಳಿತಿಗಾಗಿ ಸದಾ ಸಿದ್ಧನಾಗಿರು //
ಮಕ್ಕಳು ಶಿಷ್ಯರು ಕಲಿವ ವಯಸಿದು
ಬೈದು ಬುದ್ದಿ ಕಲಿಸಿದರೆ ತಪ್ಪು ಆಗದು
ಇದನು ತಪ್ಪು ಎಂದು ಯಾರು ಎಣಿಸಬಾರದು
ಒಳಿತಿಗೆಂದು ಮಾಡಿದ ಕರ್ಮವೇ ಇದು //
Padmanabha Varakhedi's poem -
ಗೆಳತೀ ನಿನ್ನ ನೆನಪುಗಳೇ ಹಾಗೆ
ರಂಗನ ತಿಟ್ಟಿನ ಪಕ್ಷಿಧಾಮದ ಹಾಗೇ //
ಎಲ್ಲಿಂದಲೋ ಬರುವ ಪಕ್ಷಿಗಳು
ಒಂದೆಡೆ ಕುಳಿತು
ಚೆಂದದ ಪರಿಸರ ನಿರ್ಮಿಸಿದ ಹಾಗೆ
ಅದರ ಸುತ್ತ ನಾನೂ
ನೆನಪಿನ ದೋಣಿ ಹತ್ತಿ ಸುತ್ತಿದ ಹಾಗೆ //
ಒಳ್ಳೆಯ ಅಭ್ಯಾಸ (ಮನು ಧರ್ಮದಿಂದ )
ಸೂರ್ಯದೇವ
ಹೇಳುವರೆಲ್ಲರು ದೇವರು ಇದ್ದಾನೆಂದು
ಕೇಳುವರೆಲ್ಲರೂ ಎಲ್ಲಿ ಇದ್ದಾನೆಂದು
ಗೊತ್ತೇ ನಿಮಗೆ, ಕಣ್ಣಿಗೆ ಕಾಣುವ ದೇವನು ಇರುವನು ಎಂದು
ತಿಳಿಯಿರಿ ಅವನೇ ಕಣ್ಕೋರೈಸುವ ಸೂರ್ಯನು ಎಂದು //
ನಿತ್ಯವು ಬೆಳಿಗೆ ಬೇಗನೆ ಎದ್ದು ಸೂರ್ಯಗೆ ನಮಿಸೋಣ
ಆಯುರಾರೋಗ್ಯ ನೀಡಪ್ಪ ಎಂದು ಪ್ರಾರ್ಥನೆ ಮಾಡೋಣ
ಮಲಿನತೆ ತೊಲಗಿಸಿ ಆತ್ಮಕೆ ಶಾಂತಿ ನೀಡೆಂದು ಕೇಳೋಣ
ಎಳೆಬಿಸಿಲಿಂದ ಅರೋಗ್ಯ ನೀಡು ಎನ್ನುತ ನಮಿಸೋಣ //
- ಜಗದೀಶ ಚಂದ್ರ ಬಿ ಎಸ್ -
ವಿದ್ಯಾರ್ಥಿಗಳಿಗೆ ( ಮನು ಧರ್ಮದಿಂದ )
+5 T280L291/T088L149/R075/Spd90 in voice recorder
ಎಲ್ಲರಿಗೂ ನಮಸ್ಕಾರ - ಇಂದಿನ ಸಾಹಿತ್ಯ ಚಾವಡಿಗೆ
ಆದರ್ಶ ವಿದ್ಯಾರ್ಥಿ / ಸಾಹಿತ್ಯ , ಸಂಗೀತ - ಜಗದೀಶ ಚಂದ್ರ
An Ideal Student / Lyrics & Music - Jagadeesha Chandra /
ವಿದ್ಯೆಯನ್ನು ಅರಸಿ ಬಂದ ಮಕ್ಕಳು
ಗುರು ಹಿರಿಯರನ್ನು ಆದರಿಸಬೇಕು
ಜ್ಞಾನಕೆ ಹಾತೊರೆಯುತ್ತಿರಬೇಕು
ಜ್ಞಾನ ಸುಧಾರಕ ನಾಗಬೇಕು //
ಕಲಿಯುವುದಷ್ಟೇ ಧ್ಯೇಯ ವಾಗಬೇಕು
ಸೋಮಾರಿತನವನ್ನು ಕಿತ್ತೊಗೆ ಬೇಕು
ತೇಜವಂತ ನಾಗಲು ಪಣ ತೊಡಬೇಕು
ಕೆಟ್ಟ ಕೆಲಸ ಮಾಡೆನೆಂದು ಸಾರಬೇಕು //
ಅಂತರಂಗ ಬಹಿರಂಗ ಶುದ್ಧಿ ಇರಬೇಕು
ಆಸ್ತಿಪಾಸ್ತಿ ಹಣದಾಸೆ ದೂರವಿಡಬೇಕು
ಜಗದೊಡೆಯನಿಗೆ ಋಣಿಯಾಗಬೇಕು
ಸಹಬಾಳ್ವೆ ಪುಣ್ಯವೆಂದು ಅರಿಯಬೇಕು //
ಸಮಾಜ ಮತ್ತು ವ್ಯಕ್ತಿ ( ಮನು ಧರ್ಮದಿಂದ )
ವ್ಯಕ್ತಿ ವ್ಯಕ್ತಿ ಸೇರಿ ಸಮಾಜ ಸಾಧ್ಯ
ವ್ಯಕ್ತಿ ಸರಿ ಇದ್ದರೆ ಸಮಾಜ ಸ್ವಸ್ಥ
ವ್ಯಕ್ತಿಯಲ್ಲಿ ಕರ್ತವ್ಯ ಪ್ರಜ್ಞೆಬೇಕು
ಸಮಾಜಕೆಂದು ದುಡಿವ ನಿಷ್ಠೆಬೇಕು
ಯಾವುದೇ ವ್ಯವಸ್ಥೆಯಲ್ಲಿ ದುಡಿಯುವಾಗ
ವಿವಿಧ ಕೆಲಸ ಮಾಡಲು ತುಡಿತ ಬೇಕು
ಹೊಂದಾಣಿಕೆ ಎಂಬುದು ಇರಲೇಬೇಕು
ಪರಸ್ಪರ ಗೌರವ ಕೊಡಲೇಬೇಕು
ಗುರುಗಳೆಲ್ಲ ಜ್ಞಾನವನ್ನು ಹಂಚಬೇಕು
ರೈತರೆಲ್ಲ ಅನ್ನದಾತ ಆಗಬೇಕು
ಶೂರರೆಲ್ಲ ದೇಶಸೇವೆ ಮಾಡಬೇಕು
ಇತರ ಕೆಲಸ ಮಾಡುವರೂ ಇರಲೇಬೇಕು
ವ್ಯವಸ್ಥೆ ಯೊಂದರ ಏಳಿಗೆಗೆ
ಜನರ ನಡುವೆ ಆತ್ಮೀಯತೆ ಬೆಳೆಯಬೇಕು
ಮೇಲುಕೀಳು ಎಂಬ ಭಾವ ತೊಲಗಬೇಕು
ಸೇವಾ ಮನೋಭಾವ ಮೂಡಬೇಕು
ಸಮಾಜ ಮತ್ತು ವ್ಯಕ್ತಿ ( ಮನು ಧರ್ಮದಿಂದ )
ವ್ಯಕ್ತಿ ವ್ಯಕ್ತಿ ಸೇರಿ ಸಮಾಜ ಸಾಧ್ಯ
ವ್ಯಕ್ತಿ ಸರಿ ಇದ್ದರೆ ಸಮಾಜ ಸ್ವಸ್ಥ
ವ್ಯಕ್ತಿಯಲ್ಲಿ ಕರ್ತವ್ಯ ಪ್ರಜ್ಞೆಬೇಕು
ಸಮಾಜಕೆಂದು ದುಡಿವ ನಿಷ್ಠೆಬೇಕು
ಯಾವುದೇ ವ್ಯವಸ್ಥೆಯಲ್ಲಿ ದುಡಿಯುವಾಗ
ವಿವಿಧ ಕೆಲಸ ಮಾಡಲು ತುಡಿತ ಬೇಕು
ಹೊಂದಾಣಿಕೆ ಎಂಬುದು ಇರಲೇಬೇಕು
ಪರಸ್ಪರ ಗೌರವ ಕೊಡಲೇಬೇಕು
ಗುರುಗಳೆಲ್ಲ ಜ್ಞಾನವನ್ನು ಹಂಚಬೇಕು
ರೈತರೆಲ್ಲ ಅನ್ನದಾತ ಆಗಬೇಕು
ಶೂರರೆಲ್ಲ ದೇಶಸೇವೆ ಮಾಡಬೇಕು
ಇತರ ಕೆಲಸ ಮಾಡುವರೂ ಇರಲೇಬೇಕು
ವ್ಯವಸ್ಥೆ ಯೊಂದರ ಏಳಿಗೆಗೆ
ಜನರ ನಡುವೆ ಆತ್ಮೀಯತೆ ಬೆಳೆಯಬೇಕು
ಮೇಲುಕೀಳು ಎಂಬ ಭಾವ ತೊಲಗಬೇಕು
ಸೇವಾ ಮನೋಭಾವ ಮೂಡಬೇಕು
ಎಳ್ಳು ಬೆಲ್ಲ
ಎಳ್ಳು ಬೆಲ್ಲ ತಿಂದು ನಾವು
ಒಳ್ಳೆ ಮಾತು ಆಡುವಾ
ಕಬ್ಬು ಎಂಬ ಚರುಪು ಸವಿದು
ಮಬ್ಬು ಸರಿಸಿ ಬೆಳಗುವಾ //ಎಳ್ಳು ಬೆಲ್ಲ//
ಹಿರಿಯರುಪದೇಶ ಕೇಳಿ
ಅರಿವು ಪಡೆದು ಬಾಳುವಾ
ಅರಿತು ಬೆರೆತು ಮಾತನಾಡಿ
ಕಲಹ ದೂರ ಮಾಡುವಾ //ಎಳ್ಳು ಬೆಲ್ಲ//
ಮಕ್ಕಳೊಡನೆ ಆಟವಾಡಿ
ಅಕ್ಕರೆಯ ಪಡೆಯುವಾ
ಚಿಕ್ಕವರಲಿ ದೇವರ ಕಂಡು
ಸಕ್ಕರೆಬಾಳು ನಡೆಸುವಾ //ಎಳ್ಳು ಬೆಲ್ಲ//
- ಬಿ ಎಸ್ ಜಗದೀಶ ಚಂದ್ರ -
Kunidaduva Vayasidu / Nyayave Devaru / P B Srinivas & chorus / Rajan Nagendra / Chi Udayashankara / In Keyboard B S Jagadeesha Chandra
ಕುಣಿದಾಡುವಾ ವಯಸಿದು / ನ್ಯಾಯ ವೇ ದೇವರು / ಪಿ ಬಿ ಶ್ರೀನಿವಾಸ್ ಮತ್ತು ಸಂಗಡಿಗರು / ರಾಜನ್ ನಾಗೇಂದ್ರ / ಚಿ ಉದಯಶಂಕರ / ಕೀಬೋರ್ಡ್ ನಲ್ಲಿ ಜಗದೀಶ ಚಂದ್ರ