Wednesday, April 28, 2021

Navella Yachakare - jc kavana

 ನಾವೆಲ್ಲಾ ಯಾಚಕರೆ

ಭೂಮಿಯಲ್ಲಿ ಧನಿಕ ಬಡವ
ಇರುವರೆಂಬುದು ನಿಜದ ಮಾತು
ಹಣವು ಒಂದೇ ಎಲ್ಲ ಅಲ್ಲ
ಎಂಬ ಮಾತು ಸತ್ಯವು
-
ನಾನು ಬಡವ ಎಂಬ ಚಿಂತೆ
ನಿನಗೆ ಏಕೆ ಬಂತೊ ಮರುಳೆ
ಕೊರಗಿ ಕೊರಗಿ ಮರುಗ ಬೇಡ
ನಡೆಸು ಒಳ್ಳೆಯ ಜೀವನ
ಎಲ್ಲ ನಿನ್ನ ಕೈಲೆ ಉಂಟು
ತಿಳಿದುಕೋ ಓ ಮನುಜನೇ
-
ಧನಿಕನೆಂಬ ಜಂಬವೇಕೆ
ಎಲ್ಲ ನಾನೆ ಅಹಂ ಏಕೆ
ಕ್ಷಣಿಕ ಮಾತ್ರ ಈ ಭ್ರಮೆ
ಅರಿತು ನಡೆಯೋ ಮಂಕನೇ
ಜಗದ ಒಡೆಯನ ಮುಂದೆ ನಾವು
ಅಲ್ಪ ಭಿಕ್ಷುಕರಲ್ಲವೇ
-
-ಜಗದೀಶ ಚಂದ್ರ -

No comments:

Post a Comment