ದುರಾಸೆ
ನಿದಿಗಳ ಆಸೆಗೆ ಭೂಮಿಯ ಅಗೆದು ದ್ರೋಹವ ಮಾಡಾಯ್ತು
ಅದಿರಿನ ಆಸೆಗೆ ಘಟ್ಟವ ಕಡಿದು ಬೆಟ್ಟವ ಬಗೆದಾಯ್ತು
ನರನ ದುರಾಸೆಗೆ ಮಿತಿಯೇ ಇಲ್ಲದೆ ಜಗವೇ ಹಾಳಾಯ್ತು
ಹಾಳಾಗಿಹ ಜಗವು ಮಾನವ ಸ್ವಾರ್ಥದ ಸ್ಮಾರಕವಾಗಾಯ್ತು
ರತ್ನದ ಆಸೆಗೆ ಸಾಗರ ಸುತ್ತಿ ಆಳಕೆ ಇಳಿದಾಯ್ತು
ಜಲಚರ ಭೇಧಿಸಿ ಸಾಗರವನ್ನು ಕಲುಶಿತ ಮಾಡಾಯ್ತು
ಭೂಮಿಯ ಆಸೆಗೆ ಅತಿಕ್ರಮದಿಂದ ಕೆರೆಗಳ ಮುಚ್ಚಾಯ್ತು
ಜಲನೆಲವಿಲ್ಲದೆ ರೈತರ ಕೃಶಿಕರ ಜೀವನ ಹಾಳಾಯ್ತು
ಮಿಲಿಯನ್ ಮುಂದೆ ಲಕ್ಷಕೆ ಕಿಂಚಿತ್ ಬೆಲೆಯೇ ಇಲ್ಲದಾಯ್ತು
ಬಯಕೆಯ ಬೆಟ್ಟ ಎತ್ತರ ಬೆಳೆದು ಕೊನೆಯೇ ಕಾಣದಾಯ್ತು
ಧನದ ಪಿಶಾಚಿಯ ದಾಹದ ನಾಲಿಗೆ ಎಲ್ಲವ ನುಂಗಾಯ್ತು
ಬುದ್ಧನ ಮಂತ್ರ ಆಸೆಯೆ ದುಃಖ ಎಂದೋ ಮರೆತಾಯ್ತು
ಸಮುದ್ರದ ಮುಂದೆ ಬೆಟ್ಟವು ಯಾಕೋ ತುಂಬಾ ಕುಳ್ಳಾಯ್ತು
ಗಗನದ ಮುಂದೆ ಸಾಗರವಂತೂ ಬಹಳವೆ ಕಿರಿದಾಯ್ತು
ಬ್ರಹ್ಮಾಂಡಕೆ ಬೆದರಿ ಗಗನವು ಎಲ್ಲೊ ನಾಚುತ ಮರೆಯಾಯ್ತು
ದುರಾಸೆಯ ಮುಂದೆ ಬ್ರಹ್ಮಾಂಡದ ಮಾನ ಕಾಸಿಗೆ ಹರಜಾಯ್ತು
No comments:
Post a Comment