ನಿಜ ವೈಷ್ಣವ
ವೈಷ್ಣವ ಜನರೆಂದು ಕರೆವರು ಇವರನು
ನೊಂದವರನ್ನು ಸಂತೈಸುವರು,
ಸಾಧು ಸಂತರ ಗೌರವಿಸುವರು
ದುರಭಿಮಾನವ ಬಿಟ್ಟವರು /ಪ/
ಎಲ್ಲಾ ಜನರಿಗು ವಂದಿಪ ನಾಗಿಹ
ಸಾಧು ಸಂತರ ಗೌರವಿಸುವರು
ದುರಭಿಮಾನವ ಬಿಟ್ಟವರು /ಪ/
ಎಲ್ಲಾ ಜನರಿಗು ವಂದಿಪ ನಾಗಿಹ
ಪರನಿಂದೆಯನು ಮಾಡದೆ ಇರುವವ
ಮಾತಲಿ ಮನಸಲಿ ಶುದ್ಧನು ಆಗಿಹ
ಇವನ ತಾಯಿಯೇ ಧನ್ಯಳು, ಇಂಥಹ ಮಾತೆಯೆ ಮಾನ್ಯಳು /೧/
ವೈಷ್ಣವ ಜನರೆಂದು ಕರೆಯುವ ಇವರು ಎಲ್ಲಾ ಜನರಿಂದ ವಂದ್ಯರು
ವೈಷ್ಣವ ಜನರೆಂದು ಕರೆಯುವ ಇವರು ಎಲ್ಲಾ ಜನರಿಂದ ವಂದ್ಯರು
ಸಮತೆಯ ಕಾಣುವ, ತ್ಯಾಗವ ಮಾಡಿಹ
ಸತ್ಯವ ಮೆರೆದು ಪರಧನ ನೂಕಿಹ
ಪರನಾರಿಯರಲಿ ತಾಯಿಯ ಕಾಣುತ
ಇರುವನೇ ನಿಜದಲಿ ವೈಷ್ಣವ, ಇವನೇ ನಿಜದಲಿ ವೈಷ್ಣವ /೨/
ವೈಷ್ಣವ ಜನರೆಂದು ಕರೆಯುವ ಇವರು ಎಲ್ಲಾ ತ್ಯಾಗವ ಮಾಡಿಹರು
ವೈಷ್ಣವ ಜನರೆಂದು ಕರೆಯುವ ಇವರು ಎಲ್ಲಾ ತ್ಯಾಗವ ಮಾಡಿಹರು
ಮೋಹಕೆ ಬೀಳದೆ, ಮಾಯೆಗೆ ಸಿಲುಕದೆ
ಹೃದಯದ ಬಡಿತವೆ ರಾಮನ ನಾಮವು
ಧೃಢಮನದಿಂದ ಜಂಗಮನಾಗಿಹ
ಇವನಲಿ ಎಲ್ಲ ತೀರ್ಥವಿದೆ, ತನುವಲಿ ತೀರ್ಥಕ್ಷೇತ್ರವಿದೆ /೩/
ವೈಷ್ಣವ ಜನರೆಂದು ಕರೆಯುವ ಇವರು ಎಲ್ಲಾ ಜನರಿಂದ ವಂದ್ಯರು
ವೈಷ್ಣವ ಜನರೆಂದು ಕರೆಯುವ ಇವರು ಎಲ್ಲಾ ಜನರಿಂದ ವಂದ್ಯರು
ಕಾಮವ ತ್ಯಜಿಸಿ ಕ್ರೋಧವ ವರ್ಜಿಸಿ
ಲೋಭಿಯು ಆಗದೆ ಕಪಟವ ತ್ಯಜಿಸಿಹ
ನಿಜ ವೈಷ್ಣವರ ದರುಶನ ಎಲ್ಲರ
ದುಃಖಗಳನ್ನು ನೀಗುವುದು, ನರಸಿಮಪೇಳ್ವುದು ಇದೆಅಹುದು /೪/
ವೈಷ್ಣವ ಜನರೆಂದು ಕರೆಯುವ ಇವರು ಎಲ್ಲಾ ತ್ಯಾಗವ ಮಾಡಿಹರು
ವೈಷ್ಣವ ಜನರೆಂದು ಕರೆಯುವ ಇವರು ಎಲ್ಲಾ ತ್ಯಾಗವ ಮಾಡಿಹರು
ನರಸೀಮೆಹತಾ ಅವರ 'ವೈಷ್ಣವ ಜನತೋ' ಗೀತೆಯ ಭಾವಾನುವಾದ ಬಿ ಎಸ್ ಜಗದೀಶಚಂದ್ರ
No comments:
Post a Comment