ಕೇದಾರದ ಪಯಣ
ಗಡಗಡ ನಡುಗುತ್ತ, ಹೊರೆಯನ್ನು ಹೊತ್ಕೊಂಡು
ಕಡಿದಾದ ಬೆಟ್ಟವನು ಹತ್ತುತ್ತ ತೆವಳುತ್ತಾ
ಅಯ್ಯಪ್ಪ ಅಯ್ಯಮ್ಮ ಎನ್ನುತ್ತಾ ನಡುಗುತ್ತ
ಅಯ್ಯಪ್ಪ ಅಯ್ಯಮ್ಮ ಎನ್ನುತ್ತಾ ನಡುಗುತ್ತ
ಮಾದೇವನ ನೋಡಲು ಹೊರಟೀವಿ, ಕೇದಾರನಾಥಕ್ಕೆ ಹೊರಟೇವಿ
ಡೇರೆಯಲಿ ತಂಗುತ್ತ ಗುಡಿಸಲಲಿ ತಿನ್ನುತ್ತಾ
ಮಂಜೊಳಗೆ ನುಗ್ಗುತ್ತಾ, ಹಿಮ ಬೆಟ್ಟ ನೋಡುತ್ತಾ
ಕಣಿವೇಲಿ ಹರಿಯುವ ನದಿಯನ್ನು ನೋಡುತ್ತಾ
ಮಾದೇವನ ನೋಡಲು ಹೊರಟೀವಿ, ಕೇದಾರನಾಥಕ್ಕೆ ಹೊರಟೇವಿ
ಇಳಿಜಾರು ಬೆಟ್ಟದಲ್ಲಿ, ಕಲ್ಬಂಡೆ ಹಾದಿಯಲಿ
ಬೆಟ್ಟಾದ ಕೊರಕಲಲಿ ಇಕ್ಕಟ್ಟು ದಾರಿಯಲಿ
ಮಳೆಯಲ್ಲಿ ನೆನಕೊಂಡು, ಏದುಸಿರು ಬಿಟ್ಕೊಂಡು
ಮಾದೇವನ ನೋಡಲು ಹೊರಟೀವಿ, ಕೇದಾರನಾಥಕ್ಕೆ ಹೊರಟೇವಿ
ಬೆಟ್ಟದಿ ದುಮುಕುತ್ತ, ಡೊಂಕಾಗಿ ಹರಿಯುತ್ತ
ಬಂಡೆಯ ಸಂದಿಯಲ್ಲಿ ನುಸುಳುತ್ತಾ ತೆವಳುತ್ತ
ನೊರೆ ನೀರ ನೋಡುತ್ತಾ ಆಯಾಸ ಮರೆಯುತ್ತಾ
ಮಾದೇವನ ನೋಡಲು ಹೊರಟೀವಿ, ಕೇದಾರನಾಥಕ್ಕೆ ಹೊರಟೇವಿ
ಕೇದಾರ ಬಂತೆಂದು ಗುಡಿಯನ್ನು ಕಾಣುತ್ತ,
ದಣಿವನ್ನು ಮರೆಯುತ್ತ ಹರಹರ ಎನ್ನುತ್ತಾ
ಜಗದೊಡೆಯ ಕಾಪಾಡು ಕಾಪಾಡು ಎನ್ನುತ್ತಾ
ಕಣ್ತುಂಬಾ ದೇವನ್ನ ನೋಡೀವಿ, ಜೀವನವು ಪಾವನ ಅಂದೀವಿ
- ಜಗದೀಶ ಚಂದ್ರ ಬಿ ಎಸ್ -
ಹಾಡುವವರು ಪ್ರಾಸಕ್ಕೆ / ರಾಗಕ್ಕೆ ತಕ್ಕಂತೆ ಸಣ್ಣ ಪುಟ್ಟ ಬದಲಾವಣೆಯನ್ನು ಮಾಡಿಕೊಳ್ಳಬಹುದು.
No comments:
Post a Comment