ತುಂಟ ಕೃಷ್ಣ ತರಕಾರಿ ಮಾರಿದ್ದು
Saturday, June 12, 2021
ತುಂಟ ಕೃಷ್ಣ ತರಕಾರಿ ಮಾರಿದ್ದು
Friday, June 11, 2021
ದೇವರಿದ್ದಾನೆ
ಗುಡಿಸಲಲ್ಲಿ ರಾಮು ಅಮ್ಮನನ್ನು "ಹಸಿವು, ತಿನ್ನಲು ಏನಾದರೂ ಕೊಡಮ್ಮಾ" ಎಂದು ಪೀಡಿಸುತ್ತಿದ್ದ. ಅವಳು ದುಃಖದಿಂದ ಮಗು ಬಾಗಿಲ ಬಳಿ ನೀನು ಇಟ್ಟಿರುವ ಕೃಷ್ಣನ ವಿಗ್ರಹ ಇದೆಯಲ್ಲ, ಅದರ ಮುಂದೆ ಕುಳಿತು ದೇವರನ್ನು ಬೇಡಿಕೋ" ಎಂದು ಬೀಸುವ ದೊಣ್ಣೆಯನ್ನು ತಪ್ಪಿಸಿ, ಅಲ್ಲೇ ಹಿತ್ತಲಲ್ಲಿ ಬೆಳೆದಿದ್ದ ಮುಳ್ಳು ಹರವೆ ಸೊಪ್ಪನ್ನು ಬಿಡಿಸತೊಡಗಿದಳು. "ಏನೂ ಇಲ್ಲ ಎಂದರೆ ಈ ಸೊಪ್ಪಿನ ಸಾರೇ ಗತಿ" ಎಂದು ಮನದಲ್ಲಿ ದೇವರನ್ನು ಪ್ರಾರ್ಥಿಸಿದಳು. ಅದೇ ವೇಳೆಗೆ ರಾಮು ಸಾಕಿದ ನಾಯಿ ಓಡಿ ಬಂದು ಗುಡಿಸಲೊಳಗೆ ಸೇರಿಕೊಂಡಿತು. ಅದನ್ನು ಅಟ್ಟಿಸಿಕೊಂಡು ಬಂದ ಒಂದು ದೊಡ್ಡ ನಾಯಿ ಬಾಗಿಲ ಬಳಿ ಬೌ ಬೌ ಎಂದು ಬೊಗಳತೊಡಗಿತು. ಅದರ ಹಿಂದೆಯೇ ಅದರ ಒಡೆಯ, ಜೊತೆಗೆ ಅವನ ಪುಟ್ಟ ಮಗ ಓಡಿ ಬಂದು ತಮ್ಮ ನಾಯಿಗೆ ಬೆಲ್ಟ್ ಹಾಕಿ, "ಸುಮ್ಮನೆ ಬಾ, ಎಷ್ಟು ಗಲಾಟೆ ಎಂದು ಬೈದರು". ಆಗ ಆ ಹುಡುಗ ರಾಮುವನ್ನು ನೋಡಿ ನೀನು ಅಲ್ಲಿ ಏನು ಮಾಡುತ್ತಿದ್ದಿ? ಎಂದು ಕೇಳಿದ. ಆಗ ರಾಮು "ಇದು ನನ್ನ ದೇವರು, ಇವತ್ತು ಮನೆಯಲ್ಲಿ ಏನೂ ಇಲ್ಲ, ಏನಾದರೂ ತಿನ್ನಲು ಕೊಡು, ಎಂದು ಕೇಳಿಕೊಳ್ಳುತ್ತಿದ್ದೀನಿ" ಎಂದ. ಆಗ ಆ ಹುಡುಗನ ಅಪ್ಪ " ಆ ದೇವರು ನಿನಗೆ ಏನಾದರೂ ಕೊಡುತ್ತಾನೇನೋ?" ಎಂದರು. ರಾಮು, "ನನ್ನ ದೇವರು, ನಾನು ಕೇಳಿದ್ದನ್ನು ಕೊಟ್ಟೆ ಕೊಡುತ್ತಾನೆ" ಎಂದು ವಿಶ್ವಾಸದಿಂದ ಹೇಳಿದ. ಆಗ ಆ ಒಡೆಯ ರಾಮುವಿಗೆ ಕಣ್ಣು ಮುಚ್ಚಿಕೋ ಎಂದು ಹೇಳಿ ಮೆಲ್ಲಗೆ ಆ ವಿಗ್ರಹದ ಹಿಂದೆ ಒಂದು ಬಿಸ್ಕತ್ ಪ್ಯಾಕೆಟ್ ಮತ್ತು ನೂರು ರೂಪಾಯಿ ನೋಟು ಇಟ್ಟು ಸುಮ್ಮನೆ ಹೊರಟು ಹೋದರು. ಕಣ್ಣು ಬಿಟ್ಟ ರಾಮನಿಗೆ ಆ ನಾಯಿ, ಅದರ ಒಡೆಯ, ಆ ಹುಡುಗ ಯಾರೂ ಕಾಣಿಸಲಿಲ್ಲ. ಆದರೆ ದೇವರ ಹಿಂದೆ ಇದ್ದ ಬಿಸ್ಕತ್ ಪ್ಯಾಕೆಟ್, ೧೦೦ ರೂ ಕಂಡಿತು. ಅಮ್ಮನನ್ನು ಕರೆದು " ಅಮ್ಮ, ಇಲ್ಲಿ ನೋಡು ದೇವರು ನಾನು ಹೇಳಿದ್ದನ್ನು ಕೇಳಿಸಿಕೊಂಡು ಇದನ್ನು ಕೊಟ್ಟಿದ್ದಾನೆ" ಎಂದು ಸಂತೋಷದಿಂದ ಕಿರುಚಿದ. ಅಮ್ಮ ಬಂದು "ಹೌದು ಕಂದ, ದೇವರು ಖಂಡಿತ ಇದ್ದಾನೆ" ಎಂದು ದೇವರಿಗೆ ಕೈ ಮುಗಿದಳು.
ದೇವರು ಯಾವ ರೂಪದಲ್ಲಿ ಬರುತ್ತಾನೋ ಯಾರಿಗೆ ಗೊತ್ತು. ನಮ್ಮೆಲ್ಲರಲ್ಲೂ ದೇವರಿದ್ದಾನೆ ಅಲ್ಲವೇ?
- ಜಗದೀಶ ಚಂದ್ರ ಬಿ ಎಸ್ -
Wednesday, June 9, 2021
ಬೇಡದ ವಸ್ತುಗಳು
ಬೇಡದ ವಸ್ತುಗಳು
ಋಣದ ಸೂತಕ
ಋಣದ ಸೂತಕ
Monday, June 7, 2021
ಸಹನಾಮಯಿ
Saturday, June 5, 2021
ನನಗೆ ಪತಿ ಬೇಕು
ನನಗೆ ಪತಿ ಬೇಕು
ಮಿತ್ರನ ಮನೆಯಲ್ಲಿ ಮಕ್ಕಳ ಬಗ್ಗೆ ಲೋಕಾಭಿರಾಮವಾಗಿ ಮಾತನಾಡುತ್ತಿದ್ದೆವು. ಆಗ ಮಿತ್ರನ ಹೆಂಡತಿ ಕಾವ್ಯ ಒಂದು ಘಟನೆಯನ್ನು ಹೇಳಿದಳು. ನಕ್ಕು ನಕ್ಕು ಸುಸ್ತಾಯಿತು. ಅವಳು ಹೇಳಿದಂತೆ ನಿಮಗೂ ಹೇಳುತ್ತೇನೆ ಕೇಳಿ.
ನಾನು ಒಂದು ದಿನ ನನ್ನ ಗೆಳತಿ ಸುಹಾಸಿನಿಯ ಮನೆಗೆ ಹೋಗಿದ್ದೆ. ಅವಳ ಚಿಕ್ಕ ಮಗಳು ಸುಧಾ ನನಗೆ ತುಂಬಾ ಇಷ್ಟ. ಅವಳೊಂದಿಗೆ ಕಾಲ ಕಳೆದರೆ ಹೊತ್ತೇ ಗೊತ್ತಾಗುತ್ತಿರಲಿಲ್ಲ. ಅಂದು ಸುಹಾಸಿನಿ, ಸುಧಾ ಇಬ್ಬರೂ ಮನೆಯಲ್ಲೇ ಇದ್ದರು. ಹೀಗೆ ಹರಟೆ, ಸುಧಾಳೊಂದಿಗೆ ಮಾತುಕತೆಗಳು ನಡೆಯುತ್ತಿದ್ದವು. ಇದ್ದಕ್ಕಿದ್ದಂತೆ ಸುಹಾಸಿನಿಗೆ ಒಂದು ಫೋನ್ ಬಂತು. ಅವಳು ಮಾತನಾಡುತ್ತಾ, "ಈಗ ಬಂದೆ" ಎಂದು ಹೇಳಿದಳು. ನಂತರ ನನ್ನ ಬಳಿ ಬಂದು "ಕಾವ್ಯಾ, ಇಲ್ಲೇ ಹತ್ತಿರದಲ್ಲಿ ಒಂದು ಮುಖ್ಯ ಕೆಲಸ ಇದೆ, ಹೋಗಿ ಬಂದು ಬಿಡುತ್ತೇನೆ, ನೀನು ಇಲ್ಲೇ ಇರು" ಎಂದಳು. "ನಾನೂ ಹೊರಟು ಬಿಡುತ್ತೇನೆ" ಎಂದರೂ ಬಿಡದೆ, "ಕೇವಲ ಅರ್ಧಗಂಟೆ ಕೆಲಸ, ಬೇಕಾದರೆ ಸುಧಾಳೊಂದಿಗೆ ಆಡಿಕೊಂಡಿರು" ಎಂದಳು. "ನೀನು ಆಂಟಿಯೊಂದಿಗೆ ಇರ್ತಿಯೇನೇ" ಎಂದರೆ "ಓ ನಾನು ಇರುತ್ತೇನೆ" ಎಂದು ಸುಧಾ ಖುಷಿಯಿಂದ ಹೇಳಿದಳು. ನಾನೂ ಒಪ್ಪಿಕೊಂಡೆ. ಹೀಗೆ ಸುಧಾಳೊಂದಿಗೆ ಮಾತು, ಆಟ, ಅವಳ ಮುದ್ದು ಮಾತುಗಳು ಖುಷಿಕೊಟ್ಟವು.
ಇದ್ದಕ್ಕಿದ್ದಂತೆ ಸುಧಾ ಏನನ್ನೋ ನೆನಸಿಕೊಂಡು "ಪತಿ ಎಲ್ಲಿ ಬರಲೇ ಇಲ್ಲ" ಎಂದಳು. ನಾನು, "ಯಾರೇ ಅದು ಪತಿ" ಎಂದೆ. "ಅದೇ, ಪತಿ, ಈಗ ಬಂದು ಚಿಕ್ಕ ಕಾರನ್ನು ಕೊಡುತ್ತೇನೆ ಎಂದಿದ್ದರು, ಬಂದೆ ಇಲ್ಲ" ಎಂದಳು. "ಯಾರೇ ಅದು ನಿನ್ನ ಪತಿ" ಎಂದು ಮತ್ತೆ ಕೇಳಿದರೆ "ಅವರೇ ಪತಿ, ನಂಗೆ ಅವರನ್ನ ಕಂಡರೆ ಇಷ್ಟ" ಎಂದಳು ಮುದ್ದುಮುದ್ದಾಗಿ. ನನಗೆ ನಗು ಆಶ್ಚರ್ಯ ಎಲ್ಲಾ ಆಯಿತು. ಈಗ ಸುಧಾ ಅಳಲು ಶುರು ಮಾಡಿದಳು. "ಪತಿ ಇನ್ನೂ ಬಂದೇ ಇಲ್ಲಾ" ಎಂದು ಅಳುತ್ತಾ ಗಲಾಟೆ ಮಾಡತೊಡಗಿದಳು. ನಾನು "ನೀನಿನ್ನೂ ಚಿಕ್ಕವಳು, ಹಾಗೆಲ್ಲಾ ಪತಿ ಎಂದು ಹೇಳಬಾರದು" ಎಂದರೆ ಇನ್ನೂ ರಂಪ ಮಾಡತೊಡಗಿದಳು. ನನಗೆ ಏನೂ ತೋಚದೆ ಸುಹಾಸಿನಿಗೆ ಫೋನ್ ಮಾಡಿ ಎಲ್ಲಾ ವಿಷಯ ಹೇಳಿದೆ. ಅವಳು ನಗುತ್ತಾ "ಅಯ್ಯೋ ಪತಿ ಎಂದರೆ ಗಂಡ ಅಲ್ಲವೇ, ನನ್ನ ತಮ್ಮ, ವೆಂಕಟಾಚಲಪತಿ. ಅವನನ್ನು ನಾವು ಪತಿ ಎಂದು ಕರೆಯುತ್ತೇವೆ" ಎಂದಾಗ ನನಗೆ ನಗು ಬಂತು. ನಾನು ಕೂಡಲೇ ಸುಹಾಸಿನಿಗೆ "ಒಂದು ಪುಟ್ಟ ಕಾರನ್ನು ತಂದುಕೊಡು, ಪತಿ ಕೊಟ್ಟದ್ದು ಎಂದು ಹೇಳು" ಎಂದು ಫೋನ್ನಲ್ಲಿ ಹೇಳಿದೆ. ಈಗ ಸುಧಾಗೆ, "ಈಗ ತಾನೇ ನಾನು ಪತಿಗೆ ಫೋನ್ ಮಾಡಿದ್ದೆ, ಅವರಿಗೆ ತುಂಬಾ ಕೆಲಸವಿದೆಯಂತೆ, ನಿಮ್ಮ ಅಮ್ಮ ಬರುತ್ತಾಳಲ್ಲ ಅವಳ ಕೈಲಿ ಕಾರನ್ನು ಕಳಿಸುತ್ತೇನೆ ಎಂದು ಹೇಳಿದ್ದಾರೆ" ಎಂದಾಗ ಅಳು ನಿಲ್ಲಿಸಿದಳು. ಸುಹಾಸಿನಿ ಬರುವವರೆಗೂ ಸುಧಾಳ ನೆಚ್ಚಿನ ಪತಿಯ ಬಗ್ಗೆ ಮಾತನಾಡುತ್ತಾ ಕಾಲ ಕಳೆದೆ.
"ಇದು ಪತಿಯ ಕತೆ" ಎಂದು ಹೇಳಿ ಕಾವ್ಯ ನಕ್ಕಳು. ನಾವು ಆ ಮಗುವನ್ನು ಅವಳ ಪತಿಯನ್ನು ಕಲ್ಪಿಸಿಕೊಂಡು ಮನಸಾರೆ ನಕ್ಕವು.
- ಬಿ ಎಸ್ ಜಗದೀಶ ಚಂದ್ರ -
ಮಳೆಯ ನೆನಪು
ನಾನು ಆಗಿನ್ನೂ ಹದಿ ಹರೆಯದ ಅಂಚಿನಲ್ಲಿದ್ದೆ. ತಂದೆಯವರ ಯಾವುದೋ ಕೆಲಸಕ್ಕೆ ಶೃಂಗೇರಿಗೆ ಹೋಗಬೇಕಿತ್ತು. ಖುಷಿಯಿಂದ ಊರುಗಳನ್ನು ಸುತ್ತಿಬರಬಹುದು ಎಂದು ಹೊರಟುಬಿಟ್ಟೆ. ನನಗೆ ಊರು ಸುತ್ತುವ ಹವ್ಯಾಸ, ಹೇಗಿದ್ದರೂ ಶೃಂಗೇರಿ ಗೆ ಬಂದಿರುವೆ, ಹೊರನಾಡನ್ನು ನೋಡಿಬಿಡೋಣ ಎಂದು ಹೊರಟು ಬಿಟ್ಟೆ. ಒಬ್ಬನೇ ಹೋಗಲು ನನಗೇನು ಬೇಸರವಿರಲಿಲ್ಲ. ಆಗೆಲ್ಲ ಕ್ಯಾಬ್ ಇತ್ಯಾದಿಗಳು ಇರಲಿಲ್ಲ, ಹೀಗಾಗಿ ಅಲ್ಲಿಯ ಪ್ರೈವೇಟ್ ಬಸ್ ಒಂದರಲ್ಲಿ ಕಳಸಕ್ಕೆ ಹೋಗಿ ಅಲ್ಲಿಂದ ಹೊರನಾಡಿಗೆ ಹೋಗೋಣ ಎಂದು ಹೊರಟೆ. ಕಳಸ ಬಂತು ಅಲ್ಲಿ ಇಳಿದು ಅಲ್ಲಿಯೇ ಯಾರನ್ನೋ ಹೊರನಾಡಿಗೆ ಹೇಗೆ ಹೋಗುವುದು ಎಂದು ಕೇಳಿ ಆ ದಾರಿಯಲ್ಲಿ ನಡೆಯುತ್ತಾ ಹೊರಟೆ.
ಆಗ ಮಳೆ ಶುರುವಾಯಿತು. ನಾನು ಮಳೆ ಬೆಂಗಳೂರಿನಂತೆ, ಸ್ವಲ್ಪ ಹೊತ್ತಿಗೆ ನಿಂತು ಬಿಡುತ್ತದೆ ಎಂದು ಕೊಂಡಿದ್ದೆ. ಆದರೆ ಅದು ನಿಲ್ಲಲೇ ಇಲ್ಲ. ಹೊಲಗದ್ದೆಗಳ ನಡುವೆ ನಿರ್ಜನ ರಸ್ತೆಯಲ್ಲಿ ನಾನು ಹೋಗುತ್ತಿದ್ದೆ. ನಿಲ್ಲಲು ಮನೆಗಳೂ ಇಲ್ಲ. ಆಗ ಹೊರನಾಡಿಗೆ ಬಸ್ಸೂ ಇರಲಿಲ್ಲ. ನದಿಗೆ ಬ್ರಿಜ್ ಇರಲಿಲ್ಲ. ನದಿಯನ್ನು ತೆಪ್ಪದಲ್ಲಿ ದಾಟಬೇಕಿತ್ತು. ಮಳೆಯಲ್ಲಿ ಪೂರ್ತಿ ತೊಯ್ದಿದ್ದೆ. ತಂದಿದ್ದ ಬಟ್ಟೆಬರೆಗಳ ಚೀಲ ಪ್ಲಾಸ್ಟಿಸಿನೊಳಗೆ ಇದ್ದಿದ್ದರಿಂದ ಅದು ಭದ್ರವಾಗಿತ್ತು. ಹೀಗೆ ನಡೆದು ಹೋಗುತ್ತಿದ್ದಾಗ ಯಾರೋ ಬೈಕಿನಲ್ಲಿ ಬಂದರು. ಅವರಾಗಿಯೇ ನಿಲ್ಲಿಸಿ "ಎಲ್ಲಿಗೆ" ಎಂದರು. ಹೊರನಾಡಿಗೆ ಎಂದೆ. ನಗುತ್ತ ತಲೆ ಚಚ್ಚಿಕೊಂಡು, ಹೀಗಲ್ಲ, ಇಲ್ಲಿ ಹೊಲಗದ್ದೆಗಳ ನಡುವೆ ಹೋಗಬೇಕು, ನೀವು ರಸ್ತೆಯಲ್ಲಿ ಹೊರಟರೆ ಊರೆಲ್ಲ ಸುತ್ತಿ ನಾಳೆ ಸೇರುತ್ತೀರಿ ಎಂದರು. ನನ್ನ ಸ್ಥಿತಿ ನೋಡಿ ಅವರಿಗೆ ಏನನ್ನಿಸಿತೋ, "ನನ್ನ ಜೊತೆ ಬಾ, ನಾನು ಕರೆದುಕೊಂಡು ಹೋಗುತ್ತೇನೆ" ಎಂದು ಕೂಡಿಸಿಕೊಂಡರು. ಅವರು ಅಲ್ಲಿಯೇ ಹತ್ತಿರ ಇದ್ದ ಒಂದು ಸಣ್ಣ ಮನೆಗೆ ಕರೆದುಕೊಂಡು ಹೋಗಿ, "ಮೊದಲು ಬಟ್ಟೆ ಬದಲಿಸು, ನಂತರ ಹೊರನಾಡಿಗೆ ಹೋಗುವಿಯಂತೆ" ಎಂದರು. ಅವರು ಮನೆಯವರೊಂದಿಗೆ ಅಲ್ಲಿನ ಕನ್ನಡದಲ್ಲಿ ನನ್ನ ವಿಷಯ ಹೇಳಿ ನಗುತ್ತಿದ್ದುದು, ಆ ಮನೆಯವರು, "ಯಾಕೆ ನಗುತ್ತಿ, ಇನ್ನೂ ಹುಡುಗ, ಹೋಗಲಿ ನೀನೇ ಅವನನ್ನು ಅಲ್ಲಿಗೆ ಕರೆದುಕೊಂಡು ಹೋಗು" ಎಂದು ಹೇಳುತ್ತಿದ್ದುದು ನನಗೆ ಗೊತ್ತಾಯಿತು. ಆಮೇಲೆ ಮಳೆ ಸ್ವಲ್ಪ ಕಡಿಮೆಯಾಯಿತು. ಅವರು ಹೊದ್ದುಕೊಳ್ಳಲು ಒಂದು ಗೋಣಿ, ಒಂದು ಛತ್ರಿ ಕೊಟ್ಟು, ನಡಿ ಹೋಗೋಣ, ನಾನೂ ಬರುತ್ತೇನೆ, ನಾನೂ ಅಲ್ಲಿಗೆ ಹೋಗಿ ಬಹಳ ದಿನವಾಯಿತು ಎಂದು ನನ್ನೊಂದಿಗೆ ಹೊರಟರು. ದಾರಿಯಲ್ಲಿ ನೀರು ತುಂಬಿದ ಗದ್ದೆಗಳ ಬದುಗಳ ಮೇಲೆ ನಡೆಸಿಕೊಂಡು ಹೊರಟರು. ದಾರಿಯಲ್ಲಿ ಕೆಲವು ಗದ್ದೆಗಳ ನಡುವೆ ಬೊಂಬಿನ ಗೇಟ್ ಇರುತ್ತಿತ್ತು, ಅವನ್ನು ತೆಗೆದು ನಂತರ ಮತ್ತೆ ಹಾಕಿ ನಡೆಯುತ್ತಿದ್ದರು. ದಾರಿಯಲ್ಲಿ ಸಿಕ್ಕಿದ ಮರಗಳ ಹೆಸರೆಲ್ಲವನ್ನು ಹೇಳುತ್ತಿದ್ದರು. ಅವರು ತೋರಿಸಿದ ಹೆಬ್ಬಲಸು ಎಂಬ ದೊಡ್ಡ ಮರದ ಹೆಸರು, ದೃಶ್ಯ ಇಂದೂ ನೆನಪಿದೆ. ಮಳೆ ಬಿಟ್ಟು ಬಿಟ್ಟು ಬರುತ್ತಿತ್ತು. ಆಗ ಭದ್ರಾ ನದಿ ಸಿಕ್ಕಿತು. ಮಳೆ ತೆಪ್ಪ ಇರುತ್ತದೋ ಇಲ್ಲವೋ ಎಂದರು. "ಆ ನದಿಯಲ್ಲಿ ಈಜು ಎಂದರೆ ಏನು ಮಾಡುವುದು" ಎಂದು ನನಗೆ ಭಯವಾಯಿತು. "ನನಗೆ ಈಜು ಬರುವುದಿಲ್ಲ" ಎಂದು ಮೊದಲೇ ಹೇಳಿಬಿಟ್ಟೆ. ಅದೃಷ್ಟಕ್ಕೆ ತೆಪ್ಪ ಇತ್ತು. ಅದರೊಳಗೆ ಕುಳಿತು ತುಂಬಿ ಹರಿಯಯುತ್ತಿದ್ದ ನದಿಯನ್ನು ಗಡಗಡ ನಡುಗುತ್ತಾ ದಾಟಿದೆವು.
ಅಲ್ಲಿಂದ ಮುಂದೆ ನಾನು ನೋಡಿದ ಹೊರನಾಡು ಸ್ವರ್ಗದಂತಿತ್ತು.ಸಣ್ಣ ಊರು. ಬಸ್ ಇಲ್ಲದ್ದರಿಂದ ಗಲಾಟೆ ಇರಲಿಲ್ಲ. ಜನಜಂಗುಳಿಯೂ ಇರಲಿಲ್ಲ. ನಾನು ದೊಡ್ಡ ಊರು, ಹೋಟೆಲ್ಗಳು, ರೂಮುಗಳು ಇರುತ್ತದೆ ಎಂದುಕೊಂಡುಬಿಟ್ಟಿದ್ದೆ.ನಾನೊಬ್ಬನೇ ಬಂದಿದ್ದರೆ ನಿಜವಾಗಿಯೂ ತಬ್ಬಿಬ್ಬಾಗಿ ಬಿಡುತ್ತಿದ್ದೆ. ಅಲ್ಲಿಯೇ ಇದ್ದ ಸುಂದರವಾದ ದೇವಾಲಯಕ್ಕೆ ಕರೆದುಕೊಂಡು ಹೋಗಿ ಅಲ್ಲಿನ ಜನರೊಡನೆ ಮಾತನಾಡಿ ನನಗೆ, ಅವರಿಗೆ ಒಂದೊಂದು ರೂಮನ್ನು ಕೊಡಿಸಿದರು. ಅದು ದೇವಸ್ಥಾನಕ್ಕೆ ಅಂಟಿದಂತೆಯೇ ಇತ್ತು. ಆಮೇಲೆ ಮಳೆ ಜೋರಾಗಿ ಪ್ರಾರಂಭವಾಯಿತು. ರಾತ್ರಿ ಅಲ್ಲಿಯೇ ಊಟವಾಯಿತು. ದೇವಸ್ಥಾನದ ಭೋಜನ ಮೃಷ್ಟಾನ್ನದಂತಿತ್ತು. ಅನ್ನಪೂರ್ಣೇಶ್ವರಿಯ ದಯೆ ಎಂದುಕೊಂಡೆ. ಮಳೆ ರಾತ್ರಿಯೆಲ್ಲಾ ಬರುತ್ತಲೇ ಇತ್ತು. ನನಗೆ ಮಳೆ ಬಂದು ನದಿ ತುಂಬಿ ಪ್ರವಾಹ ಬಂದುಬಿಟ್ಟರೆ ಹಿಂತಿರುಗಿ ಹೇಗೆ ಹೋಗುವುದು ಎಂದು ಭಯವಾಗಿತ್ತು. ಒಬ್ಬನೇ ಬೇರೆ, ಅನ್ನಪೂರ್ಣೇಶ್ವರಿದೇವಿಯೇ ಕಾಪಾಡುತ್ತಾಳೆ ಎಂದು ಹಾಗೆಯೆ ನಿದ್ದೆಗೆ ಜಾರಿದ್ದೆ. ಬೆಳಿಗ್ಗೆ ಎದ್ದು ಸ್ನಾನ ಎಲ್ಲವನ್ನು ಮುಗಿಸಿ, ದೇವಿಯನ್ನು ಕಣ್ತುಂಬಾ ನೋಡಿ, ಬೆಳಕಿದ್ದಾಗಲೇ ಹೊರಟುಬಿಡುವುದು ಎಂದು ಕೊಂಡೆ. ನನ್ನ ಜೊತೆ ಬಂದಿದ್ದವರ ಹೆಸರು ಹೆಬ್ಬಾರ್ ಎಂದು. "ನನಗೆ ಸ್ವಲ್ಪ ಅರ್ಜೆಂಟ್ ಕೆಲಸ ಇದೆ, ಬೇಗನೆ ಹೋರಾಡಲು ಆಗುವುದೇ" ಎಂದು ಕೇಳಿದೆ. ಬೆಳಿಗ್ಗೆ ಊಟ ಆದಕೂಡಲೇ ಹೊರಟು ಬಿಡೋಣ, ಕಳಸದಲ್ಲಿ ಬೇಕಾದಷ್ಟು ಬಸ್ ಸಿಗುತ್ತದೆ ಎಂದರು. ಮತ್ತೆ ಮಳೆ. ದೇವಸ್ಥಾನದಲ್ಲೇ ಇದ್ದುದರಿಂದ ಅಲ್ಲಿ ಓಡಾಡಿದಾಗಲೆಲ್ಲ ಅನ್ನಪೂರ್ಣೇಶ್ವರಿಗೆ ನಮಸ್ಕಾರ ಮಾಡಿ ಕಾಪಾಡು ಎಂದು ಬೇಡಿಕೊಳ್ಳುತ್ತಿದ್ದೆ. ಊಟ ಆಯಿತು. ನಂತರ ಕಡೆಯ ಬಾರಿ ದೇವಿಗೆ ನಮಸ್ಕರಿಸಿ ಹೊರಟೆವು.
ನದಿಯು ಕಪ್ಪಾಗಿ ಹರಿಯುತ್ತಿತ್ತು. ಕುದುರೆಮುಖ ಕಬ್ಬಿಣದ ಅದುರಿನ ಮಣ್ಣಿನಿಂದ ಅದು ಹೀಗೆ ಕಪ್ಪಗೆ ಕಾಣುತ್ತದೆ ಎಂದರು. ಮಳೆಗೆ ಹೆದರಿದ್ದ ನನ್ನನ್ನು ಕಂಡು "ಈ ಮಳೆ ಏನೇನೂ ಅಲ್ಲ, ಭಾರಿ ಮಳೆ ಬರುವುದನ್ನು ನೋಡಬೇಕು" ಎಂದರು. "ಈ ಮಳೆಯೇ ಸಾಕಾಗಿದೆ, ಇನ್ನು ನಿಮ್ಮ ಭಾರಿ ಮಳೆ ಬಂದರೆ? ಬೇಡಪ್ಪ ಬೇಡ" ಎಂದು ಮನದಲ್ಲೇ ಅಂದುಕೊಂಡೆ.
ದೇವರ ದಯೆಯಿಂದ ದಾಟಲು ತೆಪ್ಪ ಇತ್ತು, ಕುಳಿತು ನದಿ ದಾಟಿದೆವು. ಹೊಲಗದ್ದೆಗಳ ನಡುವೆ ನಡೆಯುತ್ತಾ ಹೆಬ್ಬಾರ ಅವರ ಮಿತ್ರರ ಮನೆಗೆ ಬಂದೆವು. ಅಲ್ಲಿ ಸ್ವಲ್ಪ ಹೊತ್ತು ಇದ್ದು ನಂತರ ಹೆಬ್ಬಾರ್ ಅವರು ನನ್ನನ್ನು ಕಳಸಕ್ಕೆ ತಂದು ಬಿಟ್ಟರು. ನಾನು ಅದೇನು ಪುಣ್ಯ ಮಾಡಿದ್ದೇನೋ, ಅನ್ನಪೂರ್ಣೇಶ್ವರಿಯ ದಯೆಯಿಂದ, ಅವರು ನನ್ನೊಂದಿಗೆ ಬಂದು ನನಗೆ ಇಷ್ಟೆಲ್ಲಾ ಸಹಾಯಮಾಡಿದರು. ಆಗ ಫೋನ್ ಯಾವುವೂ ಇರಲಿಲ್ಲ. ನನಗೂ ಅಷ್ಟೊಂದು, ಅಂದರೆ ವಿಳಾಸ ಕೇಳಿ ಬರೆದುಕೊಳ್ಳುವಷ್ಟು, ಪರಿಪಕ್ವತೆ ಇರಲಿಲ್ಲ. ಸಧ್ಯ ಅವರಿಗೆ ಧನ್ಯವಾದಗಳನ್ನು ಮನಃಪೂರ್ವಕವಾಗಿ ಹೇಳಿ ನಮಸ್ಕಾರ ಮಾಡಿದೆ.
ಅಂತೂ ಕಲಾಸದಿಂದ ಶೃಂಗೇರಿಗೆ ಬಂದೆ. ಮಲೆನಾಡಿನ ಮಳೆಯ ಅನುಭವವನ್ನು ಚೆನ್ನಾಗಿ ಅನುಭವಿಸಿದೆ. ನಾನು ನಂತರ ಹೊರನಾಡಿಗೆ ಹೋಗಿಲ್ಲ. ಈಗ ಅದಕ್ಕೆ ರಸ್ತೆ, ಬ್ರಿಜ್ ಎಲ್ಲಾ ಆಗಿ ತುಂಬಾ ಕಮರ್ಷಿಯಲ್ ಆಗಿ ಬಿಟ್ಟಿದೆ ಎಂದು ಯಾರೋ ಹೇಳಿದರು. ಆದರೆ ಇಂದಿಗೂ ಹೊರನಾಡು ಎಂದರೆ ಅಂದಿನ ಚಿಕ್ಕ ಚೊಕ್ಕ ಮುದ್ದಾದ ಹಳ್ಳಿ ಎಂದೇ ನನ್ನ ಭಾವನೆ.
Friday, June 4, 2021
Ramswamy kala malige
"ರಾಂ ಸ್ವಾಮಿ ಕಲಾ ಮಳಿಗೆ"
Wednesday, June 2, 2021
ಕೇದಾರದ ಪಯಣ
ಅಯ್ಯಪ್ಪ ಅಯ್ಯಮ್ಮ ಎನ್ನುತ್ತಾ ನಡುಗುತ್ತ
Sunday, May 23, 2021
ಅಂಡು ಸುಟ್ಟ ಬೆಕ್ಕು
ನನ್ನ ಗೆಳೆಯ ಅಂದು ನನ್ನ ಮನೆಗೆ ಬಂದಿದ್ದ. ಜೊತೆಗೆ ಅವನ ಚಿಕ್ಕ ಮಗನೂ ಬಂದಿದ್ದ. ಅವನ ಹೆಸರು ವಿಜಿ ಎಂದು. ಅವನಂತೂ ಗೆಳೆಯನ ಮೋಟರ್ ಬೈಕಿನ ಮೇಲೆಲ್ಲಾ ಕೋತಿಯಂತೆ ಆಡಿಕೊಂಡಿದ್ದ. ಇವನ ಕಾಟವನ್ನು ತಡೆಯುವುದೇ ಕಷ್ಟ ಎಂದು ಗೆಳೆಯ ತನ್ನ ಮಗನ ಚೇಷ್ಟೆಯನ್ನು ಬಣ್ಣಿಸಿದ್ದ. ಶಕ್ತಿಯಿದ್ದಿದ್ದರೆ ಅವನು ಮೋಟಾರ್ ಬೈಕನ್ನೇ ಬಿಟ್ಟುಬಿಡುತ್ತಿದ್ದನೇನೋ ಎಂದು ನನಗೂ ಅನ್ನಿಸಿತು.
ನಂತರ ನನ್ನ ಗೆಳೆಯನು ಮನೆಗೆ ಹೊರಟ. ಜೊತೆಗೆ ಅವನ ಮಗನೂ ಅವನೊಂದಿಗೆ ಹಿಂದುಗಡೆ ಕುಳಿತ. ಹಿಂದೆ ಯಾಕೋ? ಮುಂದೆ ಕೂಡುವುದಿಲ್ಲವೇನೋ? ಎಂದೆ. ಅದಕ್ಕೆ ನನ್ನ ಗೆಳೆಯನು ಜೋರಾಗಿ ನಗುತ್ತಾ ‘ಅಯ್ಯೋ ಅದೊಂದು ಕತೆ’ ಎಂದು ಈ ಕತೆಯನ್ನು ಹೇಳಿದ.
ಹಿಂದೆ ಹೀಗೆಯೇ ನಾನು ಮಗನನ್ನು ಹೊರಗೆ ಸುತ್ತಾಡಿಸಲು ಕರೆದುಕೊಂಡು ಹೋಗಿದ್ದೆ. ಆಗೆಲ್ಲಾ ಅವನನ್ನು ಮುಂದುಗಡೆಯೇ
ಕೂಡಿಸಿಕೊಂಡು ತಿರುಗಾಡುತ್ತಿದ್ದೆ. ಅಂದು ತುಂಬಾ ಬಿಸಿಲಿತ್ತು. ಮಗನನ್ನು ವಾಪಸ್ಸು ಕರೆದುಕೊಂಡು ಬರುವಾಗ ಬೈಕಿನ ಮೇಲೆ ಕೂಡಿಸಿದೆ. ಆದರೆ ಮಗ ಕಿಟಾರನೆ ಕಿರುಚಿ
ಅಳಲು ಪ್ರಾರಂಬಿಸಿದ. ನಾನು ಯಾಕೋ? ಎಂದು ಮತ್ತೆ ಅಲ್ಲೇ ಸರಿಯಾಗಿ ಕೂಡಿಸಿದರೆ ಮತ್ತೆ ಕಿರುಚಿ ಗಲಾಟೆ ಮಾಡಿದ. ನಂತರ ಅವನು ಅಲ್ಲಿಂದ ಎಗರಿಬಿಟ್ಟು ನೆಲದ ಮೇಲೆ ಅಳುತ್ತಾ ಕುಳಿತ. ಆಗ ಯಾಕಿರಬಹುದು? ಎಂದು
ಅವನು ಕುಳಿತ ಜಾಗದಲ್ಲಿ ಕೈ ಇಟ್ಟು ನೋಡಿದರೆ
ಅದು ಬಿಸಿಲಿಗೆ ಕಾದು ಕಾವಲಿಯಂತಾಗಿತ್ತು. ನನಗೆ ಆಗ ನನ್ನ ಕೈಗೇ
ಹೀಗೆ ಸುಟ್ಟರೆ ಪಾಪ ಆ ಪುಟ್ಟ ಮಗುವಿಗೆ
ಎಷ್ಟುನೋವಾಗಿರಬಹುದು? ಎಂದು ದುಃSವಾಯಿತು. ನಂತರ ಆ ಜಾಗಕ್ಕೆ ಒದ್ದೆ
ಬಟ್ಟೆಯನ್ನು ಹಾಕಿ ಕೂಡಿಸಿದರೂ ಅವನು ಅದರ ಮೇಲೆ ಕುಳಿತುಕೊಳ್ಳಲೇ ಇಲ್ಲ. ನಂತರ ಹೇಗೋ ಅವನನ್ನು ಸಮಾಧಾನ ಮಾಡಿ ನನ್ನ ಹಿಂದೆ ಕೂಡಿಸಿಕೊಂಡು ಬಂದೆ. ಅಂದಿನಿಂದ ಅವನು ಆ
ಜಾಗದಲ್ಲಿ ಏನು ಮಾಡಿದರೂ ಕೂಡುವುದಿಲ್ಲ. ಒಬ್ಬನೇ ಇದ್ದರೆ ಅಲ್ಲಿ ಕುಳಿತು ಆಡಿಕೊಳ್ಳುತ್ತಾನೆ, ನನ್ನ ಜೊತೆಗಾದರೆ ಜಪ್ಪಯ್ಯ ಅಂದರೂ ಕೂಡುವುದಿಲ್ಲ. ಒಳ್ಳೆ ತೆನಾಲಿರಾಮನ ಬೆಕ್ಕಿನಂತಾಗಿದೆ ಅವನ ಕತೆ ಎಂದು ನಕ್ಕ. ಈಗ ಆ ಘಟನೆಯನ್ನು
ನೆನೆಸಿಕೊಂಡರೆ ನಗು ಬರುವುದು, ಆದರೆ ಅಂದಿನ ದಿನ ಮಾತ್ರ ನಾನೂ ಮರೆಯುವುದಿಲ್ಲ, ನನ್ನ ಮಗನೂ ಮರೆತಿಲ್ಲ ಎಂದು ಹೇಳಿದ.
ಕುದಿಯುವ ಹಾಲನ್ನು ಕುಡಿಸಿ ನಂತರ ಹಾಲು ಎಂದರೆ ಓಡಿಹೋಗುವಂತೆ ಮಾಡಿದ್ದ ತೆನಾಲಿರಾಮನ ಬೆಕ್ಕಿನ ಕತೆಯನ್ನು ಜ್ಞಾಪಿಸಿಕೊಂಡು ಇಬ್ಬರೂ ಮನಸಾರೆ ನಕ್ಕೆವು. ‘ಅಂಡು ಸುಟ್ಟ ಬೆಕ್ಕು ಅನ್ನುತ್ತಾರಲ್ಲೋ ಹಾಗೆ ಮಾಡಿಬಿಟ್ಟೆಯಲ್ಲೋ ನಿನ್ನ ಮಗನಿಗೆ’ ಎಂದು ನಾನೂ ರೇಗಿಸಿದೆ. ನಾನು ಮೆಲ್ಲಗೆ ವಿಜಿಯನ್ನು ಮತ್ತೆ ಮುಂದಿನ ಸೀಟಿನ ಮೇಲೆ ಕೂಡಿಸಲು ನೋಡಿದೆ, ಆದರೆ ಅವನು ಕೊಸರಿಕೊಂಡು, ಎಗರಿ ಮತ್ತೆ ಹಿಂದಿನ ಸೀಟಿನ ಮೇಲೆ ಅಪ್ಪನನ್ನು ತಬ್ಬಿಕೊಂಡು ಕುಳಿತ. ಆ ಮುಗ್ಧ ಮಗುವನ್ನು
ನೋಡಿ ಪಾಪ ಅಂದು ಅದೆಷ್ಟು ಕಷ್ಟ ಅನುಭವಿಸಿತೋ ಏನೋ ಎಂದು ಕನಿಕರವಾಯಿತು, ನಗಬಾರದೂ ಎಂದರೂ ನಗು ಬಂತು. ವಿಜಿ ಮಾತ್ರ ನನ್ನನ್ನೇ ಪಿಳಿಪಿಳಿ ಎಂದು ನೋಡುತ್ತಿದ್ದ. ಟಾಟಾ ಎಂದು ಅವನಿಗೆ ವಿದಾಯ ಹೇಳಿದೆ.
- ಜಗದೀಶ ಚಂದ್ರ ಬಿ ಎಸ್,
ಅಮ್ಮನ ತರ್ಕ
ಅಮ್ಮನ ತರ್ಕ
ವಾಸು ಮನೆಯೊಂದನ್ನು ಕಟ್ಟಿಸುತ್ತಿದ್ದ. ಅದಕ್ಕಂತೂ ಒಬ್ಬರದು ಒಂದೊಂದು ಸಲಹೆಗಳು. ಮಗ ಆಗಲೇ ನನ್ನ ಕೋಣೆ ಹೀಗಿರಬೇಕು ಹಾಗಿರಬೇಕು ಎಂದು ಕನಸು ಕಟ್ಟಿದ್ದ. ಮಗಳಂತೂ ತನ್ನ ಕೋಣೆಗೆ ಬಣ್ಣ, ಅಲಂಕಾರ ಎಲ್ಲದರ ಕನಸು ಕಾಣುತ್ತಿದ್ದಳು. ಹೆಂಡತಿಯದು ಇನ್ನೇನೋ ಕನಸುಗಳು. ಅವನ ಅಮ್ಮ ಜಾನಕಮ್ಮ ಮಾತ್ರ "ಒಂದು ಒಳ್ಳೆಯ ಮನೆಯಾದರೆ ಸಾಕು" ಎನ್ನುತ್ತಿದ್ದರು. ವಾಸು, "ತನ್ನ ಮನೆಯವರ ಕನಸುಗಳು, ಮಿತ್ರರ ಸಲಹೆಗಳು ಇವುಗಳ ನಡುವೆ ಸಿಲುಕಿ, ಮನೆ ಅಂತ ಮುಗಿಸಿದರೆ ಸಾಕು" ಎಂದು ಕೊಳ್ಳುತ್ತಿದ್ದ.
ಹೀಗೆ ಮನೆಯ ಕೆಲಸಗಳು ಸಾಗುತ್ತಿದ್ದವು. ಎಲ್ಲರಿಗೂ ಅವರವರ ಕನಸುಗಳನ್ನು ಸಾಕಾರ ಗೊಳಿಸುವ ಯೋಚನೆಯೇ. ದೇವರ ಮನೆಯನ್ನು ಒಂದು ಕಡೆ ಗೊತ್ತು ಮಾಡಲಾಗಿತ್ತು. ಅದಕ್ಕೆ ಯಾರೂ ವಾರಸುದಾರರಿರಲಿಲ್ಲ, ವಾಸುವೇ ನೋಡಿಕೊಳ್ಳಬೇಕಿತ್ತು, ಜಾನಕಮ್ಮ, ನೀನು ಎಲ್ಲಿ ಮಾಡಿಕೊಟ್ಟರೆ ನಾನು ಅಲ್ಲಿ ಕುಳಿತು ದೇವರ ಧ್ಯಾನ ಮಾಡುವೆ ಎಂದುಬಿಟ್ಟಿದ್ದರು. ವಾಸು ಅವರಿವರ ಸಲಹೆಗಳನ್ನು ಕೇಳುತ್ತ ಅದನ್ನು ಮಾಡಲೋ ಬೇಡವೋ ಎಂದು ಒದ್ದಾಡುವುದನ್ನು ಕಂಡು ಜಾನಕಮ್ಮ "ಸುಮ್ಮನೆ ನಿನಗೆ ಹೇಗೆ ಬೇಕೋ ಹಾಗೆ ಕಟ್ಟಿಸು, ಹತ್ತು ಜನರನ್ನು ಕೇಳಿದರೆ ಹತ್ತು ತರಹ ಹೇಳುತ್ತಾರೆ, ಯಾರದನ್ನು ಒಪ್ಪುವೆ?" ಎಂದು ಬೈಯುತ್ತಿದ್ದರು. ಆದರೂ ವಾಸು ಅದನ್ನು ಬಿಟ್ಟಿರಲಿಲ್ಲ.
ಹೀಗೆ ಒಂದು ದಿನ ವಾಸು ಅದ್ಯಾರನ್ನೋ ಮನೆಗೆ ಕರೆದುಕೊಂಡು ಬಂದಿದ್ದ. ಅವರು ತೆಲುಗು ಮಾತನಾಡುವವರು. ವಾಸ್ತು ಪಂಡಿತರು ಎಂದು ಹೇಳಿಕೊಂಡರು. ಅವರಂತೂ ಈ ಮನೆಗೆ ಬಂದ ಕೂಡಲೇ ಅವರು ಈಗಿರುವ ಮನೆಯ ಬಗ್ಗೆ ಏನೇನೋ ಹೇಳತೊಡಗಿದರು. ಇದ್ಯಾರು ಈ ಮನೆಗೆ ಬಾಗಿಲನ್ನು ಇಲ್ಲಿಡಲು ಹೇಳಿದ್ದು? ಅಯ್ಯೋ ನಿಮ್ಮ ಮನೆಯ ಭಾವಿ ಇಲ್ಲೇಕೆ ತೊಡಿಸಿದ್ದೀರಿ? ಅಡುಗೆ ಮನೆಯ ಜಾಗವೇ ಸರಿಯಾಗಿಲ್ಲ, ಮಲಗುವ ಮನೆಯಂತೂ ದೇವರಿಗೇ ಪ್ರೀತಿ" ಎಂದೆಲ್ಲ ಬಡಬಡಿಸತೊಡಗಿದರು. ಇದು ಜಾನಕಮ್ಮನವರ ಮನೆ. ಅದನ್ನು ಅವರ ಗಂಡ ಸೀತಾಪತಿ ಕಟ್ಟಿಸಿದ್ದರು. ಆಗ ಅವರು ಪಟ್ಟ ಕಷ್ಟ,ನಷ್ಟ ಎಲ್ಲವೂ ಜಾನಕಮ್ಮನಿಗೆ ಗೊತ್ತಿತ್ತು. ಈ ಪಂಡಿತ ಹೀಗೆ ಬಂದಕೂಡಲೇ ಈಗಿರುವ ಮನೆಯ ಬಗ್ಗೆ ಮಾತನಾಡಿದ್ದು ಅವರನ್ನು ಕೆರಳಿಸಿತ್ತು. ಆದರೆ ಅದನ್ನು ತೋರಿಸದೆ ಮಗನಿಗೆ "ನಿಮ್ಮ ಹೊಸ ಮನೆಯ ಬಗ್ಗೆ ಅದೇನು ಹೇಳುತ್ತಾನೋ ಅಷ್ಟನ್ನು ಕೇಳಿ ಮೊದಲು ಹೊರಗೆ ಕಳಿಸು" ಎಂದಿದ್ದರು. "ಇಲ್ಲವಾದರೆ ನಾನೆ ಬಂದು ಹೇಳಬೇಕಾಗುತ್ತೆ" ಎಂದೂ ಹೇಳಿದರು.
ಆತ ಹೋದಮೇಲೆ ಜಾನಕಮ್ಮ ಯೋಚಿಸಿದರು. ಅಲ್ಲ, ನಾವು ಈ ಮನೆಯಲ್ಲಿ ಇಷ್ಟು ವರ್ಷ ಬದುಕಿ ಬಾಳಿದೆವು, ಈಗ ಚೆನ್ನಾಗಿಯೇ ಇದ್ದೀವಲ್ಲ, ಸೀತಾಪತಿ ಅವರು ಹೋಗಲು ಅವರ ಅರೋಗ್ಯ ಕಾರಣವೆ ಹೊರತು ಮನೆ ವಾಸ್ತುವಲ್ಲ. ಅದೆಷ್ಟು ಸುಲಭವಾಗಿ ಮನೆಯ ಬಗ್ಗೆ ಏನೇನೊ ಬಡಬಡಿಸಿ ಮಾನಸಿಕವಾಗಿ ಹೆದರಿಸಿಬಿಡುತ್ತಾರೆ, ಹೆದರುವವರಿಗೆ ಇನ್ನೂ ಹೆದರಿಸಿ ತಾವು ಹೇಳಿದ್ದೆ ಸರಿ ಎಂದು ನಂಬಿಸುತ್ತಾರೆ ಎಂದು ಮನಸಿನಲ್ಲೇ ಅಂದುಕೊಂಡರು. ಮೊದಲು ಮಗನಿಗೆ ಸರಿಯಾಗಿ ಬುದ್ದಿ ಹೇಳಿ, ಧೈರ್ಯವಾಗಿ ಮನೆಯನ್ನು ಹೇಗೆ ಬೇಕೋ ಹಾಗೆ ಕಟ್ಟಿಸಿಕೊ ಎಂದು ಹೇಳಬೇಕು ಅಂದುಕೊಂಡರು.
ಆ ಮನುಷ್ಯ ಹೋದಮೇಲೆ ವಾಸು ತಲೆಯ ಮೇಲೆ ಕೈಹೊತ್ತು ಕುಳಿತಿದ್ದ. ಅವನು ಕಟ್ಟಿಸಲು ಪ್ರಾರಂಭಿಸಿದ್ದ ಮನೆಯ ನಕ್ಷೆಯೇ ಬದಲು ಮಾಡುವಂತೆ ಆ ಪಂಡಿತ ಹೇಳಿ ಇವನ ತಲೆ ಕೆಡಿಸಿದ್ದ. ದೇವರ ಮನೆಯ ಜಾಗ ಸಂಪೂರ್ಣವಾಗಿ ಬದಲಾಯಿಸಬೇಕು ಎಂದಿದ್ದ. ಆಗ ಜಾನಕಮ್ಮ, ವಾಸುವಿಗೆ, "ದೇವರ ಮನೆ ಈಶಾನ್ಯಕ್ಕೆ ಯಾಕಿರಬೇಕು ಎಂದರೆ ದೇವರನ್ನು ಪೂಜೆ ಮಾಡುವವರು ಉತ್ತರಕ್ಕೆ ಅಥವಾ ಪೂರ್ವಕ್ಕೆ ತಿರುಗಿ ಕುಳಿತುಕೊಳ್ಳಲಿ ಎಂದು. ಇವೆಲ್ಲ ಹಿಂದೆ ದೊಡ್ಡ ಜಾಗಗಳಿದ್ದಾಗ ಮಾಡುತ್ತಿದ್ದರು. ಈಗ ನಿನ್ನ ಮನೆಯೇನು ತೋಟದ ಮನೆಯೇ, ಇವೆಲ್ಲ ನೋಡಲಿಕ್ಕೆ" ಎಂದು ಬುದ್ಧಿ ಹೇಳಿ ಧೈರ್ಯ ತುಂಬಿದರು. "ದೇವರ ಕೊಣೆಯಲ್ಲಿ ನಾವು ಪೂರ್ವ ದಿಕ್ಕಿಗೆ ಕುಳಿತು ಪೂಜೆ ಮಾಡಬಹುದು, ಅಷ್ಟು ಸಾಕು, ಸುಮ್ಮನೆ ಏನೇನೋ ಯೋಚಿಸಬೇಡ" ಎಂದಿದ್ದರು.
ಆ ಪಂಡಿತ ಇನ್ನೊಮ್ಮೆ ಮನೆಗೆ ಬಂದಾಗ, ಜಾನಕಮ್ಮ ತಾವೇ ಮುಂದೆ ಬಂದು ಆತನನ್ನು ಚೆನ್ನಾಗಿ ತರಾಟೆಗೆ ತೆಗೆದುಕೊಂಡು, "ನಾವು ಈ ಮನೆಯನ್ನು ಬೆವರು ಹರಿಸಿ ಕಟ್ಟಿಸಿದೆವು, ನೀನು ಬಂದು ಒಂದು ನಿಮಿಷಕ್ಕೆ ಅದು ಸರಿ ಇಲ್ಲ, ಇದು ಸರಿ ಇಲ್ಲ ಎಂದು ಹೇಳಿ ಹೆದರಿಸಿಬಿಟ್ಟೆಯಲ್ಲಾ" ಎಂದೆಲ್ಲ ಹೇಳಿ ಬೈದು "ಇನ್ನೊಮ್ಮೆ ಇಲ್ಲಿ ಬಂದರೆ ನಾವು ಸುಮ್ಮನಿರುವುದಿಲ್ಲ" ಎಂದು ಒಳಗೆ ಹುಡುಗಿಟ್ಟುಕೊಂಡಿದ್ದ ಸಿಟ್ಟನ್ನು ಕಕ್ಕಿ, ಬೈದು ಕಳಿಸಿದರು. ವಾಸು, ಅಮ್ಮನಿಗೆ ಬುದ್ಧಿ ಹೇಳಲು ಬಂದಾಗ, ಅವರು ಸಾಕ್ಷಾತ್ ದುರ್ಗೆಯೇ ಆಗಿ ಮಗನಿಗೆ, "ನಿನಗೆ ಹೇಗೆ ಬೇಕೋ ಹಾಗೆ ಕಟ್ಟಿಸಿದರೆ ಸರಿ, ಇಲ್ಲವಾದರೆ ಮನೆ ಕಟ್ಟಿಸಲೇ ಬೇಡ, ಈ ಮನೆಯೇ ಸಾಕು" ಎಂದಾಗ ವಾಸು ಹೆದರಿ ತೆಪ್ಪಗಾಗಿದ್ದ. ಆಗ ಜಾನಕಮ್ಮ "ನನಗೆ ಗೊತ್ತಿರುವವರು ಒಬ್ಬರು ಇದ್ದಾರೆ, ಅವರು ಹೇಳಿದಂತೆ ಮಾಡು, ಎಲ್ಲವೂ ಸರಿಯಾಗುತ್ತದೆ" ಎಂದು ಸಮಾಧಾನವನ್ನೂ ಹೇಳಿದ್ದರು.
ಒಂದು ದಿನ ಜಾನಕಮ್ಮನವರು ಯಾರೋ ಒಬ್ಬರನ್ನು ಕರೆಸಿದ್ದರು. ಜಾನಕಮ್ಮನವರೆ ಮುಂದೆ ನಿಂತು ಹೊಸ ಮನೆಯ ವಿವರಗಳನ್ನು ನೀಡಿ ಅವರ ಸಲಹೆ ಕೇಳಿದರು. ಅವರು ಬಹಳ ನಿಧಾನಸ್ಥರು, ನಿಧಾನವಾಗಿ, ನಾಟಕದವರಂತೆ ಮಾತನಾಡುತ್ತಿದ್ದರು. ಅವರು ಸಾವಕಾಶವಾಗಿ ಹೇಳಿದ್ದುದನ್ನೆಲ್ಲಾ ಕೇಳಿ ಸಮಾಧಾನವಾಗಿ, "ನೀವು ಮಾಡುತ್ತಿರುವುದೆಲ್ಲ ಸರಿಯಾಗಿದೆ, ಮನೆಯ ಗೇಟು, ಬಾಗಿಲನ್ನು ಸ್ವಲ್ಪ ನಾನು ಹೇಳುವಂತೆ ಬದಲಾಯಿಸಿದರೆ ಸಾಕು" ಎಂದರು. ಇದು ವಾಸುವಿನ ಮನಸ್ಸಿಗೆ ಒಂದು ರೀತಿಯ ಸಮಾಧಾನ ತಂದಿತು. ಆಗ ಅವರು " ನೀವು ಇನ್ನು ಯಾರನ್ನೂ ಕೇಳದೆ ಬೇಗ ಮುಗಿಸಿ, ಇನ್ನೊಂದೆರಡು ತಿಂಗಳಿನಲ್ಲಿ ಗೃಹಪ್ರವೇಶ ಮಾಡಿಸಿದರೆ ನಿಮಗೆ ತುಂಬಾ ಒಳ್ಳೆಯದಾಗುತ್ತೆ, ನಾನು ಜಾನಕಮ್ಮನವರೊಡನೆ ಸಮಾಲೋಚಿಸಿ ದಿನ ಹೇಳುತ್ತೇನೆ" ಎಂದಾಗ ವಾಸುವಿಗೆ ನಿರಾಳ. ಅವರ ಸಂಭಾವನೆ ಮೊದಲಾದುವನ್ನು ಕೇಳಿದಾಗ, "ಜಾನಕಮ್ಮ ನವರ ಬಳಿ ದುಡ್ಡು ತೆಗೆದುಕೊಳ್ಳುವುದೇ? ಎಂಥ ಮಾತನಾಡುತ್ತೀರಿ" ಎಂದು ಬಾಯಿ ಮುಚ್ಚಿಸಿದ್ದರು.
ಅಂತೂ ಜಾನಕಮ್ಮನವರು ಗೃಹಪ್ರವೇಶದ ಮುಹೂರ್ತವನ್ನು ಮಗನಿಗೆ ತಿಳಿಸಿದರು. ಈಗ ಮನೆಯ ಕೆಲಸಗಳು ಬೇಗ ಬೇಗ ಚುರುಕಾಗಿ ಸಾಗತೊಡಗಿದವು. ವಾಸುವಿಗೆ ಯಾರನ್ನು ಸಲಹೆ ಕೇಳಲು ಪುರುಸೊತ್ತು ಇರಲಿಲ್ಲ, ಕೇಳಬೇಡ ಎಂದು ಸಲಹೆ ಬಂದುದ್ದರಿಂದ, ಅಮ್ಮನ ಹೆದರಿಕೆಯೂ ಇದ್ದುದರಿಂದ ತೆಪ್ಪಗೆ ಮನೆ ಮುಗಿಸುವುದರಲ್ಲಿ ತೊಡಗಿಸಿಕೊಂಡ. ಮನೆ ಮುಗಿಯಿತು. ಗೃಹಪ್ರವೇಶವೂ ಆಯಿತು. ಎಲ್ಲರಿಗೂ ಖುಷಿಯೋ ಖುಷಿ. ಮನೆಯ ಬಗ್ಗೆ ಯಾರಾದರೂ ತಕರಾರು ಎತ್ತಿದರೆ ಜಾನಕಮ್ಮನ ರೌದ್ರಾವತಾರವನ್ನು ನೋಡಬೇಕಿತ್ತು. ಅವರು, "ತಾವು ಹೇಗೆ ರೌದ್ರಾವತಾರ ತಾಳಿದ್ದೆ" ಎಂದು ಆ ಹಳೆಯ ವಾಸ್ತು ಪಂಡಿತನನ್ನು ಓಡಿಸಿದ್ದನ್ನು ಎಲ್ಲರಿಗೂ ಹೇಳುತ್ತಿದ್ದರು. ಇಂಡೈರೆಕ್ಟ್ ಆಗಿ ಅದು ಮನೆಯಬಗ್ಗೆ ಕೊಂಕು ತೆಗೆಯುವವರಿಗೆ ತೆಪ್ಪಗಿರುವಂತೆ ಹೇಳುವ ಸೂಚನೆಯೇ ಆಗಿತ್ತು. ಅದು ಎಲ್ಲರಿಗೂ ನಾಟಿತ್ತು. ಮಾತನಾಡಿದರೆ ತಮಗೂ ಅದೇ ಗತಿ ಎಂದು ತೆಪ್ಪಗಿದ್ದರು. ಜಾನಕಮ್ಮನವರಿಗೂ ಅದೇ ಬೇಕಿತ್ತು. ನಮ್ಮ ಮನೆ, ನಮಗೆ ಬೇಕಾದಂತೆ ಕಟ್ಟಿಸುತ್ತೇವೆ, ನಮ್ಮ ಕಷ್ಟ ನಮಗೆ, ಹೀಗೆ ಎಲ್ಲಾ ಆದಮೇಲೆ ಸಲಹೆ ನೀಡಲು ಇವರುಗಳ್ಯಾರು ಎಂಬುದು ಜಾನಕಮ್ಮನ ತರ್ಕವಾಗಿತ್ತು.
ಆ ಮನೆಗೆ ಜಾನಕಮ್ಮನ ದಾಯಾದಿಯೊಬ್ಬರ ಮಗ ನಾರಾಯಣ, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಗಿ, ತುಂಬಾ ಚುರುಕಾಗಿ, ಮನೆಯವರಂತೆಯೇ ಅನೇಕ ಸಹಾಯ ಮಾಡಿಕೊಂಡು ಓಡಾಡುತ್ತಿದ್ದ. ಜಾನಕಮ್ಮ ಅವರೂ ಅವನಿಗೆ ವಿಶೇಷ ಉಪಚಾರ ಮಾಡುತ್ತಿದ್ದರು. ಎಲ್ಲರೂ, "ಇದೇನು ಅಷ್ಟೇನೂ ನಮ್ಮೊಂದಿಗೆ ಆಪ್ತವಾಗಿರದಿದ್ದ, ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ ಇವನಿಗೆ ಇಷ್ಟೊಂದು ಉಪಚಾರ", ಎಂದು ಮಾತನಾಡಿ ಕೊಳ್ಳುತ್ತಿದ್ದರು. ಅವರ ಮನೆಗೆ ಸಲಹೆ ನೀಡಿದ "ಆ ಹೊಸ ಪಂಡಿತ ಎಲ್ಲಿ? ಬಂದೇ ಇಲ್ಲ" ಎಂದು ಎಲ್ಲರೂ ವಿಚಾರಿಸಿದಾಗ, ಜಾನಕಮ್ಮ, "ಅವನೊಬ್ಬ, ಹಾಗೆಯೇ, ಸ್ವಲ್ಪ ಜಂಬ ಮಾಡುತ್ತಾನೆ, ಗೋಗರೆದರೂ ಬರಲೇ ಇಲ್ಲ" ಎಂದು ನಾರಾಯಣನನ್ನು ನೋಡಿ ಕಣ್ಣು ಮಿಟುಕಿಸಿದ್ದರು. ಆದರೆ ಅದು ಬೇರೆ ಯಾರಿಗೂ ಕಂಡಿರಲಿಲ್ಲ.
- ಬಿ ಎಸ್ ಜಗದೀಶ ಚಂದ್ರ -
Wednesday, April 28, 2021
Navella Yachakare - jc kavana
ನಾವೆಲ್ಲಾ ಯಾಚಕರೆ
ಕೊರಗಿ ಕೊರಗಿ ಮರುಗ ಬೇಡ